ಕರ್ನಾಟಕ

karnataka

By

Published : Mar 6, 2020, 5:40 PM IST

ETV Bharat / business

ರಾಜ್ಯಕ್ಕೂ ತಟ್ಟಿದ Yes ಬ್ಯಾಂಕ್ ಬಿಸಿ; ATMಗಳಲ್ಲಿ ನೋ ಕ್ಯಾಶ್, ಗ್ರಾಹಕರ ಪ್ರಶ್ನೆಗಳಿಗೆ ಉದ್ಯೋಗಿಗಳು ಹೈರಾಣು

ಹುಬ್ಬಳ್ಳಿಯಲ್ಲಿ ಯೆಸ್​ ಬ್ಯಾಂಕ್ ಗ್ರಾಹಕರು ನಗದು ಹಿಂಪಡೆಯಲು ಕ್ಲಬ್ ರಸ್ತೆ ಶಾಖೆಗೆ ಭೇಟಿ ನೀಡುತ್ತಿದ್ದು, ದೀರ್ಘ ಸರತಿ ಸಾಲಿನಲ್ಲಿ ಅನೇಕ ಗಂಟೆಗಳ ಕಾದು ಸುಸ್ತಾದರು. ಚೆಕ್ ಮತ್ತು ವಾಪಸಾತಿ ಸ್ಲಿಪ್‌ಗಳೊಂದಿಗೆ ಹಣ ಪಾವತಿಸಲು ಹೆಣಗಾಡುತ್ತಿರುವಾಗ, 'ಈ ಬಿಕ್ಕಟ್ಟು ಯಾವಾಗ ಬಗೆಹರಿಯುತ್ತದೆ ಎಂಬುದನ್ನು ವಿವರಿಸಿ' ಎಂದು ಗ್ರಾಹಕರು ಬ್ಯಾಂಕ್ ಉದ್ಯೋಗಿಗಳನ್ನು ಒತ್ತಾಯಿಸುತ್ತಿದ್ದ ದೃಶ್ಯಾವಳಿಗಳು ಕಂಡುಬಂತು.

Yes Bank
ಯೆಸ್​ ಬ್ಯಾಂಕ್

ಬೆಂಗಳೂರು:ಯೆಸ್​ ಬ್ಯಾಂಕ್ ಮೇಲೆ ವಹಿವಾಟಿನ ನಿರ್ಬಂಧ ಆರ್​ಬಿಐ ಹೇರಿದ್ದರಿಂದ ರಾಜ್ಯಾದ್ಯಂತ ಹಲವಾರು ಯೆಸ್ ಬ್ಯಾಂಕ್ ಠೇವಣಿದಾರರು ಬ್ಯಾಂಕ್​ನ ಎಟಿಎಂಗಳಲ್ಲಿ ಹಣದ ಅಭಾವ ಹಾಗೂ ಶಾಖೆಗಳಲ್ಲಿನ ವಿತರಣೆಯ ಬಿಕ್ಕಟ್ಟು ಎದುರಿಸಬೇಕಾಯಿತು.

ಬೆಂಗಳೂರಿನಲ್ಲಿ 37 ಮತ್ತು ಕರ್ನಾಟಕದಲ್ಲಿ 74 ಶಾಖೆಗಳನ್ನು ಯೆಸ್ ಬ್ಯಾಂಕ್​ ಹೊಂದಿದೆ. ಖಾತೆದಾರರಿಗೆ ಬ್ಯಾಂಕ್​ ತನ್ನ ಬದ್ಧತೆಯನ್ನು ಉಳಿಸಿಕೊಳ್ಳುತ್ತದೆ ಎಂದು ಯೆಸ್​ ಬ್ಯಾಂಕ್ ಉದ್ಯೋಗಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

ಅನೇಕ ಗ್ರಾಹಕರು ತಮ್ಮ ಹಣ ವಾಪಸ್​ ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳತ್ತ ಧಾವಿಸಿದರು. ಇದರ ಪರಿಣಾಮವಾಗಿ ಶುಕ್ರವಾರ ಕೆಲವೇ ಗಂಟೆಗಳಲ್ಲಿ ಹಣವೆಲ್ಲ ಖಾಲಿಯಾಗಿ ಎಟಿಎಂಗಳನ್ನು ಮುಚ್ಚಬೇಕಾಯಿತು ಎಂದು ತಿಳಿಸಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ನಿನ್ನೆ ಬ್ಯಾಂಕ್‌ ಗ್ರಾಹಕರು ಪ್ರತಿ ಖಾತೆಯಿಂದ ₹ 50,000 ಮಾತ್ರ ಹಣ ಹಿಂದೆ ಪಡೆಯಲು ಗರಿಷ್ಠ ಮಿತಿ ವಿಧಿಸಿದೆ. ಮುಂದಿನ ಆದೇಶ ನೀಡುವವರೆಗೆ ಇದು ಜಾರಿಯಲ್ಲಿ ಇರಲಿದೆ ಎಂದಿದೆ.

ABOUT THE AUTHOR

...view details