ಕರ್ನಾಟಕ

karnataka

By

Published : Sep 12, 2019, 11:54 PM IST

ETV Bharat / business

1 ರೂ.ಗೆ ಇಡ್ಲಿ ಮಾರುವ 80ರ ವೃದ್ಧೆಗೆ ಆನಂದ್​ ಮಹೀಂದ್ರ, ಕೇಂದ್ರ ಸಚಿವರ ಸೆಲ್ಯೂಟ್

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವೃದ್ಧೆ ಕಮಲಥಾಲ್ ಅವರು ಇಡ್ಲಿ ಸಿದ್ಧಪಡಿಸಿ ಮಾರಾಟ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಡಿ ದೇಶಾದ್ಯಂತ ವೈರಲ್ ಆಗಿತ್ತು.

ವೃದ್ಧೆ

ಚೆನ್ನೈ:ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಒಂದು ರೂಪಾಯಿಗೆ ಇಡ್ಲಿ ಮಾರುತ್ತಿದ್ದ ವೃದ್ಧೆಯ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು ಒಂದೇ ದಿನದಲ್ಲಿ ಎಲ್​ಪಿಜಿ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ.

ವೃದ್ಧೆಯ ಪಡಿಪಾಟಲು ನೋಡಿದ ಸ್ಥಳೀಯ ಎಲ್​ಪಿಜಿ ಸಂಪರ್ಕ ಅಧಿಕಾರಿಗಳು ಕಮಲಥಾಲ್ ಅವರ ಬಳಿ ಬಂದು ಅಡುಗೆ ಅನಿಲ ಸಿಲಿಂಡರ್​ ಸಂಪರ್ಕವನ್ನು ಒಂದೇ ದಿನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ.

'ಒಂದು ವಿನಮ್ರ ಕಥೆಯು ನೀವು ಮಾಡುವ ಪ್ರತಿಯೊಂದು ಕೆಲಸದ ಭಾಗವಾಗಬಲ್ಲದು. ಕಮಲಥಾಲ್ ಎಂಬ ವೃದ್ಧೆಯು ಸ್ಟೌವ್​ ಬಳಸಿ ಇಡ್ಲಿ ಮಾಡಿ 1 ರೂ.ಗೆ ಮಾರುವುದನ್ನು ನಾನು ನೋಡಿ ಆಶ್ಚರ್ಯ ಪಟ್ಟಿದ್ದೇನೆ. ಯಾರಾದರೂ ಹತ್ತಿರದಲ್ಲಿ ಇದ್ದರೆ ಆಕೆಯ ವ್ಯವಹಾರದಲ್ಲಿ ಸಹಾಯ ಮಾಡಿ ಎಂದು ಆನಂದ್ ಮಹೀಂದ್ರ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದರು.

ಕಮಲಥಾಲ್ ಅವರ ಉತ್ಸಾಹ ಮತ್ತು ಬದ್ಧತೆಗೆ ಸೆಲ್ಯೂಟ್​. ಎಲ್​ಪಿಜಿ ಸಂಪರ್ಕ ಪಡೆಯಲು ಸ್ಥಳೀಯ ಒಎಂಸಿ ಅಧಿಕಾರಿಗಳು ಅವರಿಗೆ ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details