ಕರ್ನಾಟಕ

karnataka

ETV Bharat / business

ಜೇಟ್ಲಿ, ಜಯಂತ್ ಸಿನ್ಹಾರಿಂದ ಜೆಟ್​ ಏರ್​ವೇಸ್​ ದಿವಾಳಿ- ಸುಬ್ರಮಣಿಯನ್‌ ಸ್ವಾಮಿ ಆರೋಪ - undefined

ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್​ವೇಸ್‌ಗೆ ಚೇತರಿಕೆ ನೀಡುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸುವಂತೆ ಕೋರಿದ ಅವರು, ಬಿಜೆಪಿಯ ಘನತೆಗೆ ಧಕ್ಕೆ ತರಲು ಜೇಟ್ಲಿ ಹಾಗು ಜಯಂತ್‌ ಸಿನ್ಹಾ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿ ಟ್ವೀಟ್​ ಮಾಡಿದ್ದಾರೆ.

ಸುಬ್ರಮಣ್ಯನ್ ಸ್ವಾಮಿ: ಸಂಗ್ರಹ ಚಿತ್ರ

By

Published : Apr 25, 2019, 7:54 PM IST

ನವದೆಹಲಿ:ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ಬೇಜವಾಬ್ದಾರಿ ನಡೆಗಳಿಂದ ಜೆಟ್​ ಏರ್​ವೇಸ್​ ಸಂಸ್ಥೆ ಅಧೋಗತಿಗೆ ತಲುಪಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

ಬುಧವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದ ಡಾ. ಸುಬ್ರಮಣ್ಯನ್​ ಸ್ವಾಮಿ, ಈ ವಿಷಯದ ಕುರಿತು ತಕ್ಷಣವೇ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.

ಮತ್ತೊಂದು ವಿಮಾನಯಾನ ಸಂಸ್ಥೆಯಾದ ಸ್ಪೈಸ್​ ಜೆಟ್​ಗೆ ಅನುಕೂಲ ಮಾಡಿಕೊಡಲು ಜೆಟ್​ ಏರ್​ವೇಸನ್ನು​ ಮುಳುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಹಿಂದೆ ಸರಿಯುವಂತೆ ಜೇಟ್ಲಿ ಹಾಗೂ ಸಿನ್ಹಾ ಅವರಿಗೆ ಪ್ರಧಾನಿ ಮೋದಿ ಸೂಚಿಸಬೇಕು. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮತ್ತೊಬ್ಬರಿಗೆ ಲಾಭ ಮಾಡಿಕೊಡಲು ಹೊರಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಟ್ವಿಟ್ಟರ್​ನಲ್ಲಿ ಆಪಾದಿಸಿದ್ದಾರೆ.

ಜೆಟ್​ ಏರ್​ವೇಸ್​ನ ನಷ್ಟವನ್ನು ಸ್ಪೈಸ್​ಜೆಟ್​ ಹಾಗೂ ವಿಸ್ತಾರ ಏರ್​ ಲೈನ್ಸ್​ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಗಂಭೀರ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಜೆಟ್​ ಸಂಸ್ಥೆಯನ್ನು ಏರ್​ ಇಂಡಿಯಾ ಜೊತೆಗೆ ವಿಲೀನಗೊಳಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details