ಕರ್ನಾಟಕ

karnataka

By

Published : Apr 24, 2021, 5:56 PM IST

ETV Bharat / business

2022ರಲ್ಲಿ 1.42 ಲಕ್ಷ ಕೋಟಿ ರೂ. ವಹಿವಾಟಿನ ಗುರಿ ಇರಿಸಿಕೊಂಡ ಕರ್ನಾಟಕ ಬ್ಯಾಂಕ್​

ಹೊಸ ಹಣಕಾಸು ವರ್ಷದಲ್ಲಿ ಒಟ್ಟು ವ್ಯವಹಾರ ವಹಿವಾಟನ್ನು (ಒಟ್ಟು ಠೇವಣಿ ಮತ್ತು ಮುಂಗಡ) ಸುಮಾರು 1,42,500 ಕೋಟಿ ರೂ.ಗೆ ತಲುಪಲು ಬ್ಯಾಂಕ್ ತನ್ನ ವ್ಯವಹಾರವನ್ನು ಶೇ 12ರಷ್ಟು ಬೆಳವಣಿಗೆಯ ಯೋಜನೆಯನ್ನು ಕರ್ನಾಟಕ ಬ್ಯಾಂಕ್ ಹಾಕಿಕೊಂಡಿದೆ.

Karnataka Bank
Karnataka Bank

ನವದೆಹಲಿ:ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ವ್ಯವಹಾರವನ್ನು ಶೇ 12ರಿಂದ 1.42 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹಾಕಿಕೊಂದು, ಬಂಡವಾಳದಲ್ಲಿ ಚಿಲ್ಲರೆ ಸಾಲದ ಪಾಲು ಹೆಚ್ಚಿಸಲಾಗುತ್ತದೆ ಎಂದು ಕರ್ನಾಟಕ ಬ್ಯಾಂಕ್ ಹೇಳಿದೆ.

ಷೇರುದಾರರಿಗೆ ನೀಡಿದ ಸಂವಹನದಲ್ಲಿ ಬ್ಯಾಂಕ್ ತನ್ನ ಆರೋಗ್ಯಕರ ವ್ಯವಹಾರ ಬೆಳವಣಿಗೆ ಕಾಣುತ್ತಿದೆ. 'ಕಾಸ್ಟ್ - ಲೈಟ್' ಹೊಣೆಗಾರಿಕೆ ಬಂಡವಾಳ ಮತ್ತು ಸದೃಢವಾದ ಮೂಲಭೂತ ಅಂಶಗಳ ಹಿನ್ನೆಲೆಯಲ್ಲಿ 2021-22 ಅನ್ನು ಶ್ರೇಷ್ಠತೆಯ ವರ್ಷವಾಗಿ ನೋಡಲು ಶ್ರಮಿಸುತ್ತಿದೆ ಎಂದಿದೆ.

ಹೊಸ ಹಣಕಾಸು ವರ್ಷದಲ್ಲಿ ಒಟ್ಟು ವ್ಯವಹಾರ ವಹಿವಾಟನ್ನು (ಒಟ್ಟು ಠೇವಣಿ ಮತ್ತು ಮುಂಗಡ) ಸುಮಾರು 1,42,500 ಕೋಟಿ ರೂ.ಗೆ ತಲುಪಲು ಬ್ಯಾಂಕ್ ತನ್ನ ವ್ಯವಹಾರವನ್ನು ಶೇ 12ರಷ್ಟು ಬೆಳವಣಿಗೆಯ ಯೋಜನೆ ಹಾಕಿಕೊಂಡಿದೆ.

ತನ್ನ ಮುಂಗಡ ಬಂಡವಾಳದಲ್ಲಿ ಮರು ಹೊಂದಿಸುವ ಕಾರ್ಯತಂತ್ರವಾಗಿ ಖಾಸಗಿ ವಲಯದ ಸಾಲದಾತನು ಚಿಲ್ಲರೆ ವ್ಯಾಪಾರಕ್ಕೆ ಕನಿಷ್ಠ 50 ಪ್ರತಿಶತ, ಮಧ್ಯಮ ಕಾರ್ಪೊರೇಟ್‌ಗಳಿಗೆ 35 ಪ್ರತಿಶತ ಮತ್ತು ದೊಡ್ಡ ಕಾರ್ಪೊರೇಟ್‌ಗಳಿಗೆ 15 ಪ್ರತಿಶತಕ್ಕಿಂತ ಅಧಿಕ ಸಾಲ ನೀಡಲಿದೆ ಎಂದಿದೆ.

ದೊಡ್ಡ ಕಾರ್ಪೊರೇಟ್ ಸಾಲಗಾರರ ಮೇಲಿನ ಸಾಂದ್ರತೆ ತಗ್ಗಿಸುವ ಮತ್ತು ನಿರಂತರ ಸುಸ್ಥಿರತೆ ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ಬ್ಯಾಂಕ್ ಈ ದಿಕ್ಕಿನತ್ತ ಸುಸ್ಥಿರ ರೀತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಮತ್ತು ಮಧ್ಯ ಕಾರ್ಪೊರೇಟ್ ಮುಂಗಡಗಳ ಮೇಲಿನ ಇಳುವರಿ ದೊಡ್ಡ ಕಾರ್ಪೊರೇಟ್‌ಗಳಿಗಿಂತ ಉತ್ತಮವಾಗಿದೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂಎಸ್ ಮಹಾಬಲೇಶ್ವರ ಹೇಳಿದ್ದಾರೆ.

ಕೋವಿಡ್​ -19 2020-21ರಲ್ಲಿ ನಮ್ಮ ಬ್ಯಾಂಕ್ ಸೇರಿದಂತೆ ಖಾಸಗಿ ವಲಯದ ಬ್ಯಾಂಕ್​ಗಳಿಗೆ ಒಂದು ಸವಾಲಾಗಿತ್ತು. 2020ರ ಮಾರ್ಚ್- ಆಗಸ್ಟ್ ಅವಧಿಯಲ್ಲಿ ಸಾಲಗಳಿಗೆ ಯಾವುದೇ ಬಡ್ಡಿ ವಿಧಿಸದಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಬ್ಯಾಂಕ್​ ಈಗಾಗಲೇ ಆರ್​ಬಿಐಗೆ ಅನುಗುಣವಾಗಿ ಅರ್ಹ ಸಾಲಗಾರರಿಗೆ ಈ ಆರು ತಿಂಗಳ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ಗ್ರೇಟಿಯಾ ಪಾವತಿ ಮಾಡಿರುವುದಾಗಿ ತಿಳಿಸಿದರು.

ABOUT THE AUTHOR

...view details