ಮುಂಬೈ:ಜೆಟ್ ಏರ್ವೇಸ್ ಸಿಬ್ಬಂದಿಯ ಒಂದು ತಿಂಗಳ ಸಂಬಳ ನೀಡಲು ಎಸ್ಬಿಐಗೆ ನಿರ್ದೇಶನ ನೀಡುವಂತೆ ರಾಷ್ಟ್ರೀಯ ಏವಿಯೇಷನ್ ಗಿಲ್ಡ್ (ಎನ್ಎಜಿ) ಪ್ರಧಾನಿಗೆ ಪತ್ರ ಬರೆದಿದೆ.
ನರೇಂದ್ರ ಮೋದಿಗೆ ಪತ್ರದ ಪ್ರತಿಯನ್ನು ಇ-ಮೇಲ್ ಮಾಡಿದ ಎನ್ಎಜಿ ಅಧ್ಯಕ್ಷ ಕರನ್ ಚೋಪ್ರಾ , ತುರ್ತು ಹಾಗೂ ಮಾನವೀಯತೆಯ ಆಧಾರದ ಮೇಲೆ ಜೆಟ್ ಏರ್ವೇಸ್ನ ಎಲ್ಲ ಸಿಬ್ಬಂದಿಗೆ ಒಂದು ತಿಂಗಳ ವೇತನ ನೀಡುವಂತೆ ನಾವು ಕೋರುತ್ತಿದ್ದೇವೆ. ಕಿಂಗ್ ಫೀಷರ್ ಏರ್ಲೈನ್ಸ್ ಎದುರಿಸಿದ ದುಸ್ಥಿತಿ ಇಲ್ಲಿ ಸಂಭವಿಸದಿರಲಿ ಎಂದು ಉಲ್ಲೇಖಿಸಿದ್ದಾರೆ.
ಜೆಟ್ ಏರ್ ನಿರ್ವಹಣೆಗೆ ಅಗತ್ಯವಿರುವ ಮಧ್ಯಂತರ ಹಣಕಾಸು ನೆರವನ್ನು ಬ್ಯಾಂಕ್ ಒಕ್ಕೂಟ ಈವರೆಗೆ ಸಂದಾಯ ಮಾಡಿಲ್ಲ. ಹೀಗಾಗಿ ವಿಮಾನಯಾನ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಆಗಸ್ಟ್ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಜೆಟ್, ಹಿರಿಯ ವ್ಯವಸ್ಥಾಪಕರು, ಪೈಲೆಟ್ಗ ಹಾಗೂ ಇಂಜಿನಿಯರ್ ವೇತನ ನೀಡಿರಲಿಲ್ಲ. ಕಳೆದ ಸೆಪ್ಟೆಂಬರ್ನಲ್ಲಿ ಅಲ್ಪ ಪ್ರಮಾಣದ ವೇತನವನ್ನು ಮಾತ್ರವೇ ಜೆಟ್ ಏರ್ವೇಸ್ ತನ್ನ ಸಿಬ್ಬಂದಿಗೆ ನೀಡಿತ್ತು. ಇನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಸಂಬಳವನ್ನು ಸಂಸ್ಥೆ ನೀಡಿಲ್ಲ. ಸಾವಿರಾರು ಕೋಟಿ ರೂ. ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥಾಪಕ ಮುಖ್ಯಸ್ಥ ನರೇಶ್ ಗೋಯಲ್ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.