ಕರ್ನಾಟಕ

karnataka

By

Published : Jul 3, 2019, 12:37 PM IST

ETV Bharat / business

ಭಾರತಕ್ಕೆ ಚಿಯರ್ ಹಾಡಿದ ಅಜ್ಜಿಯ ಅಡ್ರಸ್​ ಕೊಡಿ, ಎಲ್ಲ ಮ್ಯಾಚ್​ಗಳ ಟಿಕೆಟ್​ ಕೊಡಬೇಕು..!

ಭಾರತ- ಬಾಂಗ್ಲಾ ನಡುವಣ ಪಂದ್ಯದ ವೇಳೆ ತಮ್ಮ ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು ಕೈಯಲ್ಲಿ ಊದುವ ವಾದ್ಯ ಹಿಡಿದು 87 ವರ್ಷದ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದರು. ಇಳಿ ಪ್ರಾಯದಲ್ಲೂ ಕ್ರಿಕೆಟ್​ ಮೇಲಿನ ಕಾಳಜಿ ಕಂಡ ಆನಂದ್ ಮಹೀಂದ್ರ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಭಾರತ- ಬಾಂಗ್ಲಾ ನಡುವಣ ನಡೆದ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಕ್ರೀಡಾಭಿಮಾನಗಳ ಹೃದಯ ಗೆದ್ದ 87ರ ಅಜ್ಜಿ ಚಾರುಲತಾ ಪಟೇಲ್​ ಅವರಿಗೆ ಮಹೀಂದ್ರ ಗ್ರೂಪ್​ ಮುಖ್ಯಸ್ಥ ಆನಂದ್​ ಮಹೀಂದ್ರ ಭರ್ಜರಿ ಉಡುಗೊರೆ ನೀಡಿದ್ದಾರೆ.

ತಮ್ಮ ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು ಕೈಯಲ್ಲಿ ಊದುವ ವಾದ್ಯ ಹಿಡಿದು 87 ವರ್ಷದ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದರು. ಇಳಿ ಪ್ರಾಯದಲ್ಲೂ ಕ್ರಿಕೆಟ್​ ಮೇಲಿನ ಕಾಳಜಿ ಕಂಡ ಆನಂದ್ ಮಹೀಂದ್ರ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

'ನನ್ನ ರೂಢಿಗತವಾಗಿ, ನಾನು ಕ್ರಿಕೆಟ್​ ಪಂದ್ಯಗಳನ್ನು ವಿಕ್ಷೀಸುವುದಿಲ್ಲ. ಆದರೆ, ನಾನು ಈ ಮಹಿಳೆಯನ್ನು ನೋಡಲು ಟಿವಿ ಆನ್ ಮಾಡಿದೆ. ಅವಳು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವರಂತೆ ಕಂಡಳು' ಎಂದು ಟ್ವೀಟ್ ಮಾಡಿದ್ದಾರೆ.

ಇವರ ಟ್ವಿಟ್ಟರ್​ಗೆ ಪ್ರತಿಕ್ರಿಯಿಸಿದ ಪರವೇಶ್​ ವರ್ಮ ಎಂಬುವವರು, 'ನೀವು ಯಾಕೆ ಅವರಿಗೆ ಪ್ರಾಯೋಜಕತ್ವ ನೀಡಬಾರದು' ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ತಕ್ಷಣವೇ ಉತ್ತರಿಸಿದ ಆನಂದ್ ಮಹೀಂದ್ರ, 'ಅವರು ಯಾರು ಎಂಬುದನ್ನು ಪತ್ತೆಹಚ್ಚಿ. ನಾನು ವಾಗ್ದಾನ ನೀಡುತ್ತಿದ್ದೇನೆ, ಅವರ ಟಿಕೆಟ್​ನ ಹಣ ನಾನು ಮರುಭರ್ತಿಸುತ್ತೇನೆ. ಮುಂದಿನ ಎಲ್ಲ ಪಂದ್ಯಗಳ ಟಿಕೆಟ್​ ವೆಚ್ಚವನ್ನೂ ನಾನೇ ಭರಿಸುತ್ತೇನೆ' ಎಂದು ಭರವಸೆ ನೀಡಿದ್ದಾರೆ.

ಆನಂದ್ ಮಹೀಂದ್ರ ಅವರ ಈ ನಡೆ ಟ್ವಿಟ್ಟರ್​ನಲ್ಲಿ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದ್ದು, 12 ಸಾವಿರ ಅನುಯಾಯಿಗಳು ಮೆಚ್ಚಿಕೊಂಡಿದ್ದಾರೆ. ಸುಮಾರು ಎರಡು ಸಾವಿರ ಜನರು ಇದಕ್ಕೆ ಪ್ರತಿಕ್ರಿಯಿಸಿ ಮರುಟ್ವೀಟ್​ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details