ಕರ್ನಾಟಕ

karnataka

ETV Bharat / business

ಕೊರೊನಾ ಸಮರದಲ್ಲಿ ಭಾರತಕ್ಕೆ ನೆರವಾಗಲು ಅಮೆರಿಕದ ಟಾಪ್​ 40 ಕಂಪನಿಗಳ ಜಂಟಿ ಕಾರ್ಯಪಡೆ ರಚನೆ..

ಟಾಸ್ಕ್ ಫೋರ್ಸ್ ಪರವಾಗಿ ಪುನೀತ್ ರಂಜನ್ ಭಾರತ ಶೀಘ್ರದಲ್ಲೇ ಬಿಕ್ಕಟ್ಟಿನಿಂದ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..

By

Published : Apr 27, 2021, 3:26 PM IST

US
US

ವಾಷಿಂಗ್ಟನ್ :ಕೊರೊನಾ ಸೋಂಕಿನ ವಿರುದ್ಧ ಭಾರತದ ಹೋರಾಟದಲ್ಲಿ ಕೈಜೋಡಿಸಲು ಜಾಗತಿಕ ಸಮುದಾಯ ಮುಂದೆ ಬಂದಿದೆ. ಅನೇಕ ರಾಷ್ಟ್ರಗಳು ಈಗಾಗಲೇ ತಮ್ಮ ಬೆಂಬಲ ಘೋಷಿಸಿವೆ.

ಇತ್ತೀಚೆಗೆ ಅಮೆರಿಕದ ವ್ಯಾಪಾರ ಸಮುದಾಯವು ಒಗ್ಗಟ್ಟಿನಿಂದ ಧ್ವನಿಗೂಡಿಸಿ, ಸೂಪರ್ ಪವರ್​ನ ಸುಮಾರು 40 ಅಗ್ರ ಕಂಪನಿಗಳು ಒಟ್ಟಾಗಿ ಭಾರತಕ್ಕೆ ಅಗತ್ಯ ನೆರವು ನೀಡಲು ಕಾರ್ಯಪಡೆ ರಚಿಸಲು ನಿರ್ಧರಿಸಿವೆ.

ಸಮಾರಂಭದಲ್ಲಿ ಯುಎಸ್ ಚೇಂಬರ್ಸ್ ಆಫ್ ಕಾಮರ್ಸ್‌ನ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್, ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್‌ನರ್‌ಶಿಪ್ ಫೋರಮ್ ಮತ್ತು ಬ್ಯುಸಿನೆಸ್ ರೌಂಡ್‌ಟೇಬಲ್ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಬ್ಯುಸಿನೆಸ್ ಮತ್ತು ಪಾರ್ಟ್‌ನರ್‌ಶಿಪ್ ಫೋರಂ ಭಾಗವಹಿಸಿದ್ದವು. ವ್ಯಾಪಾರ ಸಂಘಗಳ ಮೇಲ್ವಿಚಾರಣೆ ಕುರಿತು ಸೋಮವಾರ ಸಭೆ ನಡೆಸಲಾಯಿತು.

ಮುಂದಿನ ಕೆಲವು ವಾರಗಳಲ್ಲಿ ಸುಮಾರು 20,000 ಆಕ್ಸಿಜನ್ ಸಾಂದ್ರಕಗಳನ್ನು ಭಾರತಕ್ಕೆ ಕಳುಹಿಸಲು ಕಂಪನಿ ನಿರ್ಧರಿಸಿದೆ ಎಂದು ಡೆಲಾಯ್ಟ್ ಸಿಇಒ ಪುನೀತ್ ರೆನ್​ಜೆನ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಭಾರತಕ್ಕೆ ಪ್ರಮುಖ ವೈದ್ಯಕೀಯ ಉಪಕರಣಗಳು, ಲಸಿಕೆಗಳು ಮತ್ತು ಆಮ್ಲಜನಕ ಸೇರಿದಂತೆ ಇತರ ಪ್ರಮುಖ ಸರಬರಾಜುಗಳನ್ನು ಒದಗಿಸಲಾಗುತ್ತದೆ ಎಂದು ಕಾರ್ಯಪಡೆಯ ಮೂಲಗಳು ತಿಳಿಸಿವೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರು ದೇಶದಲ್ಲಿ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಕಾರ್ಪೊರೇಟ್ ಸಂಸ್ಥೆಗಳಿಂದ ಅಂತಾರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸುವುದು ಇದೇ ಮೊದಲು ಎಂದು ಹೇಳಿದ್ದಾರೆ.

ಸಾಧ್ಯವಾದಷ್ಟು ಯಾವುದೇ ರೀತಿಯಲ್ಲಿ ಭಾರತಕ್ಕೆ ಸಹಾಯ ಮಾಡಲು ಅಮೆರಿಕದ ಕಂಪನಿಗಳು ಸಿದ್ಧವಾಗಿವೆ ಎಂದು ಪುನೀತ್ ರೆಂಜನ್ ಭರವಸೆ ನೀಡಿದ್ದಾರೆ.

ವಾರದ ಮಧ್ಯದಲ್ಲಿ 1000 ಆಮ್ಲಜನಕ ಸಾಂದ್ರಕಗಳು ಭಾರತವನ್ನು ತಲುಪಲಿವೆ ಎಂದು ತಿಳಿದು ಬಂದಿದೆ. ಮೇ 5ರ ವೇಳೆಗೆ ಆ ಸಂಖ್ಯೆ 11,000 ತಲುಪಲಿದೆ. ಒಟ್ಟು 25 ಸಾವಿರ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸುವ ಗುರಿ ಹೊಂದಿದೆ.

ಅಗತ್ಯವಿದ್ದರೆ ಹೆಚ್ಚಿನದನ್ನು ಕಳುಹಿಸುವುದಾಗಿ ಭರವಸೆ ನೀಡಿದರು. ಮುಂದಿನ ಹಂತದಲ್ಲಿ 10 ಲೀಟರ್, 45 ಲೀಟರ್ ಆಕ್ಸಿಜನ್ ಸಿಲಿಂಡರ್ ಮತ್ತು ಇತರ ಮಾನಿಟರಿಂಗ್ ಕಿಟ್‌ಗಳನ್ನು ಕಳುಹಿಸಲಾಗುತ್ತದೆ.

ಹೊಸದಾಗಿ ರೂಪುಗೊಂಡ ಕಾರ್ಯಪಡೆಯು ಇ-ಕಾಮರ್ಸ್, ಚಿಲ್ಲರೆ ವ್ಯಾಪಾರ, ಫಾರ್ಮಾ, ಟೆಕ್ ಮತ್ತು ಉತ್ಪಾದನಾ ಕೈಗಾರಿಕೆಗಳನ್ನು ಒಳಗೊಂಡಿವೆ.

ಕಾರ್ಯಪಡೆ ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿದೆ. ಭಾರತಕ್ಕೆ ಅಗತ್ಯವಿರುವ ಪ್ರಮುಖ ಸಲಕರಣೆಗಳ ಪಟ್ಟಿಯನ್ನು ಅವರು ಈಗಾಗಲೇ ಅವರಿಗೆ ನೀಡಿದ್ದಾರೆ.

ಟಾಸ್ಕ್ ಫೋರ್ಸ್ ಪರವಾಗಿ ಪುನೀತ್ ರಂಜನ್ ಭಾರತ ಶೀಘ್ರದಲ್ಲೇ ಬಿಕ್ಕಟ್ಟಿನಿಂದ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details