ಕರ್ನಾಟಕ

karnataka

By

Published : Jun 17, 2020, 4:40 PM IST

ETV Bharat / business

EMI ಮುಂದೂಡಿಕೆ: ಬಡ್ಡಿಗೆ ಬಡ್ಡಿ ವಿಧಿಸುವ ಅರ್ಹತೆ ಇಲ್ಲ- ಸುಪ್ರೀಂ ಮೌಖಿಕ ಆದೇಶ

ನಿಷೇಧ ನಿಗದಿಪಡಿಸಿದ ನಂತರ ಅದು ಅಪೇಕ್ಷಿತ ಉದ್ದೇಶಗಳನ್ನು ಪೂರೈಸಬೇಕು. ಬಡ್ಡಿಗೆ ಬಡ್ಡಿ ವಿಧಿಸುವಲ್ಲಿ ಯಾವುದೇ ಅರ್ಹತೆ ಕಾಣಿವುದಿಲ್ಲ. ಸರ್ಕಾರವು ಬ್ಯಾಂಕ್​ಗಳಿಗೆ ಎಲ್ಲವನ್ನೂ ಬಿಡಲು ಸಾಧ್ಯವಿಲ್ಲದ ಕಾರಣ ಈ ವಿಷಯದಲ್ಲಿ ಅದು ಮಧ್ಯಪ್ರವೇಶಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್​ ಭೂಷಣ್​, ಎಸ್ ಕೆ ಕೌಲ್ ಮತ್ತು ನ್ಯಾಯಮೂರ್ತಿ ಎಂ ಆರ್ ಷಾ ಅವರನ್ನೂ ಒಳಗೊಂಡ ನ್ಯಾಯಪೀಠ ಮೌಖಿಕವಾಗಿ ಸೂಚಿಸಿದೆ.

Supreme Court
ಸುಪ್ರೀಂಕೋರ್ಟ್​

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಘೋಷಿಸಲಾದ ಮೊರಟೋರಿಯಂ ಅವಧಿಯಲ್ಲಿ ಸಾಲ ಪಾವತಿ ಕಂತುಗಳಿಗೆ "ಬಡ್ಡಿಗೆ ಬಡ್ಡಿ ವಿಧಿಸಲು ಯಾವುದೇ ಅರ್ಹತೆ ಇಲ್ಲ" ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ ( ಆರ್ ಬಿಐ) ಆಗಸ್ಟ್ ಕೊನೆಯವರೆಗೆ ಅವಧಿ ಸಾಲಗಳ ಕಂತು ಮುಂದೂಡಲು (ಮೊರಟೋರಿಯಂ) ಗ್ರಾಹಕರಿಗೆ ಅವಕಾಶ ನೀಡಿತ್ತು. ಸಾಂಕ್ರಾಮಿಕ ಸಮಯದಲ್ಲಿ ಮಂಜೂರು ಮಾಡಿದ ಆರು ತಿಂಗಳ ನಿಷೇಧದ ಅವಧಿಯಲ್ಲಿ ಇಎಂಐಗಳಿಗೆ ಬಡ್ಡಿ ವಿಧಿಸುವ ವಿಷಯಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಆಗಸ್ಟ್​ವರಗೆ ಮುಂದೂಡಿದೆ.

ಸಾಲ ನಿಷೇಧದ ಪ್ರಯೋಜನಗಳನ್ನು ಸರ್ಕಾರವು ಜನರಿಗೆ ಲಭ್ಯವಾಗುವಂತೆ ಮಾಡಬೇಕಿದೆ. ಸಾಲ ಕಟ್ಟಲು 6 ತಿಂಗಳು ವಿನಾಯಿತಿ ನೀಡಿ, ಮುಂದೆ ಅದಕ್ಕೆ ಬಡ್ಡಿ ತೆಗೆದುಕೊಂಡರೆ ಅದರ ಲಾಭ ಜನಕ್ಕೆ ಆಗವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆಗ್ರಾ ನಿವಾಸಿ ಗಜೇಂದ್ರ ಶರ್ಮಾ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿದ್ದು, ಆರ್‌ಬಿಐನ ಮಾರ್ಚ್ 27ರ ಅಧಿಸೂಚನೆಯ ಭಾಗವನ್ನು ಅಲ್ಟ್ರಾ ವೈರ್‌ಗಳಾಗಿ ಘೋಷಿಸಲು ನಿರ್ದೇಶನ ಕೋರಿದೆ. ಭಾರತದ ಸಂವಿಧಾನದ 21 ನೇ ಪರಿಚ್ಛೇದದಡಿ ಖಾತರಿಪಡಿಸಿದ ಜೀವನ ಹಕ್ಕಿನಲ್ಲಿ ಅಡಚಣೆ ಸೃಷ್ಟಿಸುತ್ತದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಂದು ವಿಚಾರಣೆಯ ಸಂದರ್ಭದಲ್ಲಿ ಬ್ಯಾಂಕ್​ಗಳು ಠೇವಣಿದಾರರಿಗೆ ಬಡ್ಡಿಯನ್ನು ಪಾವತಿಸಬೇಕಾಗಿದೆ. ಆದ್ದರಿಂದ ಬಡ್ಡಿ ಮನ್ನಾ ಮಾಡುವುದು ಸುಲಭವಲ್ಲ ಎಂದು ಹೇಳಿದರು.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಒಮ್ಮೆ ನಿಷೇಧವನ್ನು ನಿಗದಿಪಡಿಸಿದ ನಂತರ ಅದು ಅಪೇಕ್ಷಿತ ಉದ್ದೇಶಗಳನ್ನು ಪೂರೈಸಬೇಕು ಮತ್ತು ಸರ್ಕಾರವು ಬ್ಯಾಂಕ್​ಗಳ ಮೇಲೆ ಎಲ್ಲವನ್ನೂ ಬಿಟ್ಟುಬಿಡಲು ಸಾಧ್ಯವಿಲ್ಲದ ಕಾರಣ ಈ ವಿಷಯದಲ್ಲಿ ಅದು ಮಧ್ಯಪ್ರವೇಶಿಸಬೇಕಿದೆ ಎಂದು ಹೇಳಿತು.

ಬ್ಯಾಂಕ್​ಗಳಲ್ಲಿ 133 ಟ್ರಿಲಿಯನ್ ರೂ. ಠೇವಣಿ ಇದೆ. ಅವುಗಳ ಮೇಲೆ ಬಡ್ಡಿಯನ್ನು ಪಾವತಿಸಬೇಕಾಗಿದೆ. ಮನ್ನಾವು ಕ್ಯಾಸ್ಕೇಡಿಂಗ್ ಪರಿಣಾಮವನ್ನು ಬೀರುತ್ತದೆ ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.

ಕೇಂದ್ರ ಮತ್ತು ಆರ್‌ಬಿಐ ಪರಿಸ್ಥಿತಿಯನ್ನು ಪರಿಶೀಲಿಸಲು ಅವಕಾಶ ನೀಡಿದ ನ್ಯಾಯಾಲಯ, ಆಗಸ್ಟ್ ಮೊದಲ ವಾರದಲ್ಲಿ ವಿಚಾರಣೆಗೆ ಒಳಪಡಿಸಲಿದೆ. ಸಾಲದ ನಿಷೇಧದ ವಿಷಯದಲ್ಲಿ ಈ ಮಧ್ಯೆ ಹೊಸ ಮಾರ್ಗಸೂಚಿಗಳನ್ನು ತರಬಹುದೇ ಎಂದು ಪರಿಶೀಲಿಸುವಂತೆ ಭಾರತೀಯ ಬ್ಯಾಂಕ್​ಗಳ ಸಂಘವನ್ನು ಕೇಳಿದೆ.

ನಿಷೇಧದ ಅವಧಿಯಲ್ಲಿ ಸಂಪೂರ್ಣ ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್​ಗಳ ಆರ್ಥಿಕ ಸ್ಥಿರತೆಗೆ ಅಪಾಯವಾಗಬಹುದು. ಇದು ಠೇವಣಿದಾರರ ಹಿತಾಸಕ್ತಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಮೆಹ್ತಾ ವಾದಿಸಿದರು.

ABOUT THE AUTHOR

...view details