ಕರ್ನಾಟಕ

karnataka

By

Published : Jan 28, 2021, 7:45 AM IST

ETV Bharat / business

ಬ್ಯಾಂಕ್​​​ಗಳಲ್ಲಿ ಕುಂದು ಕೊರತೆ ಪರಿಹಾರ ವ್ಯವಸ್ಥೆ ಬಲಪಡಿಸಲು ಚೌಕಟ್ಟು ರೂಪಿಸಿದ ಆರ್‌ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕ್​​ಗಳಲ್ಲಿನ ಕುಂದು ಕೊರತೆ ಪರಿಹಾರ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ, ಚೌಕಟ್ಟನ್ನು ರೂಪಿಸಿದೆ. ಇವುಗಳ ಮೂಲಕ ಬ್ಯಾಂಕ್​​ ಗ್ರಾಹಕರ ದೂರುಗಳನ್ನು ಸರಿಯಾದ ಸಮಯಕ್ಕೆ ಪರಿಹರಿಸಬೇಕು.

RBI
(ಆರ್‌ಬಿಐ) ಬ್ಯಾಂಕ್​​ಗಳಲ್ಲಿನ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ, ಚೌಕಟ್ಟನ್ನು ರೂಪಿಸಿದೆ. ಇವುಗಳ

ಮುಂಬೈ: ಬ್ಯಾಂಕ್​​ಗಳಲ್ಲಿನ ಕುಂದು ಕೊರತೆ ನಿವಾರಿಸುವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಕೆಲವು ಮಾನದಂಡಗಳನ್ನು ಜಾರಿಗೆ ತಂದಿದೆ.

ಇದರ ಪ್ರಕಾರ, ಬ್ಯಾಂಕ್​ಗಳು ಆರ್​ಬಿಐಗೆ ದೂರನ್ನು ನೀಡಬಹುದಾಗಿದೆ. ಅಲ್ಲದೇ ಬ್ಯಾಂಕ್​ನಿಂದ ನಿರ್ವಹಿಸಬಹುದಾದ ದೂರುಗಳ ಪರಿಹಾರದ ವೆಚ್ಚವನ್ನು ಮರು ಪಡೆಯಬಹುದಾಗಿದೆ. ಇನ್ನು ಬ್ಯಾಂಕಿಂಗ್ ಓಂಬುಡ್ಸ್ಮನ್ ಕಚೇರಿಗಳಲ್ಲಿ (ಒಬಿಒ) ಸ್ವೀಕರಿಸಿದ ದೂರುಗಳ ಸಂಖ್ಯೆ ಅವರ ಪೀರ್ ಗುಂಪಿನ ಸರಾಸರಿಗಿಂತ ಹೆಚ್ಚಾಗಿದೆ. ಈ ಹಿನ್ನೆಲೆ ಬ್ಯಾಂಕ್​ಗಳ ಕುಂದುಕೊರತೆ ಪರಿಹರಿಸುವಲ್ಲಿ ಆರ್​ಬಿಐ ತೀವ್ರ ವಿಮರ್ಶೆಗೆ ಕೂಡ ಒಳಗಾಗಿದೆ.

ಓದಿ:ಮೂರನೇ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್​ಗೆ 749.73 ಕೋಟಿ ಲಾಭ

ಬ್ಯಾಂಕ್​​ಗಳು ಸ್ವೀಕರಿಸಿದ ದೂರುಗಳ ಪ್ರಮಾಣ ಮತ್ತು ಸ್ವರೂಪದ ಬಗ್ಗೆ ಹೆಚ್ಚಿನ ಒಳನೋಟವನ್ನು ಹೊಂದುವುದು. ಪರಿಹಾರವನ್ನು ನೀಡುವುದರ ಜೊತೆಗೆ ಸರಿಯಾದ ಸಮಯಕ್ಕೆ ವಹಿವಾಟು ನಡೆಸುವುದು. ಗ್ರಾಹಕರಿಂದ ತೃಪ್ತಿದಾಯಕ ಫಲಿತಾಂಶ ಮತ್ತು ಅವರ ವಿಶ್ವಾಸವನ್ನು ಉತ್ತೇಜಿಸುವುದು. ಕುಂದುಕೊರತೆ ಪರಿಹಾರ ಕಾರ್ಯವಿಧಾನದಲ್ಲಿ ಬ್ಯಾಂಕ್​​​ಗಳು ನಿರಂತರ ಸಮಸ್ಯೆಗಳನ್ನು ಹೊಂದಿರುವುದರಿಂದ ಆರ್​​ಬಿಐನ ಈ ಚೌಕಟ್ಟಿನ ಉದ್ದೇಶವಾಗಿದೆ.

ABOUT THE AUTHOR

...view details