ಕರ್ನಾಟಕ

karnataka

ETV Bharat / business

ಬಡ್ಡಿ ದರ ಕಡಿತ ಹಿಂತೆಗೆತ: ಚುನಾವಣೆ ದೃಷ್ಟಿಯ ಪಶ್ಚಾತ್ತಾಪವಾ? ನಿರ್ಮಲಾಗೆ ಪ್ರಿಯಾಂಕಾ ಪ್ರಶ್ನೆ - Nirmala Sitharaman vs Priyanka Gandhi

ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-2021ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ದರಗಳಲ್ಲೇ ಮುಂದುವರಿಯಲಿವೆ. ಅಂದರೆ, ಮಾರ್ಚ್ 2021ರ ಹೊತ್ತಿಗೆ ಇದ್ದ ದರಗಳೇ ಇರಲಿವೆ. ನಿನ್ನೆ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್​ ಮಾಡಿದ್ದರು.

Priyanka Gandhi
Priyanka Gandhi

By

Published : Apr 1, 2021, 10:47 AM IST

ನವದೆಹಲಿ:ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳ ಕಡಿತದ ಆದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-2021ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ದರಗಳಲ್ಲೇ ಮುಂದುವರಿಯಲಿವೆ. ಅಂದರೆ, ಮಾರ್ಚ್ 2021ರ ಹೊತ್ತಿಗೆ ಇದ್ದ ದರಗಳೇ ಇರಲಿವೆ. ನಿನ್ನೆ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್​ ಮಾಡಿದ್ದರು.

ನಿರ್ಮಲಾ ಸೀತಾರಾಮನ್ ಅವರು ನಿಜವಾಗಿಯೂ ಭಾರತ ಸರ್ಕಾರದ ಸಣ್ಣ ಯೋಜನೆಗಳ ಮೇಲಿನ ಬಡ್ಡಿದರಗಳ ಕಡಿತದ ಆದೇಶವನ್ನು ಮೇಲ್ವಿಚಾರಣೆಯಿಂದ ಹೊರಡಿಸಿದ್ದ ಅಥವಾ ಇದು ಚುನಾವಣೆಯ ದೃಷ್ಟಿಯ ಪಶ್ಚಾತ್ತಾಪವಾ ಎಂದು ಪ್ರಿಯಾಂಕಾ ಅವರು ಪ್ರಶ್ನಿಸಿದ್ದಾರೆ.

ಐದು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯ ನಡೆಯುತ್ತಿರುವ ಮಧ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಸರ್ಕಾರದ ಡ್ಯಾಮೆಜ್​ ನಿಯಂತ್ರಣದ ಬಗ್ಗೆ ಸುಳಿವು ನೀಡಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಅಸ್ಸೊಂ ರಾಜ್ಯಗಳಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿದೆ.

ABOUT THE AUTHOR

...view details