ಕರ್ನಾಟಕ

karnataka

By

Published : Mar 17, 2020, 8:23 PM IST

ETV Bharat / business

ಭಾರತೀಯ ರೈಲ್ವೆಯನ್ನ ಖಾಸಗಿಯವರ ಕೈಗಿಡಲ್ಲ: ಕೇಂದ್ರದ ಸ್ಪಷ್ಟನೆ

ರಾಷ್ಟ್ರೀಯ ಸಂಪರ್ಕ ಸಾಧನವಾದ ರೈಲ್ವೆ ಅಭಿವೃದ್ಧಿಗಾಗಿ ಮುಂದಿನ 12 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದ್ದೇವೆ. ನಾನು ಸ್ಪಷ್ಟವಾಗಿ ಒಂದು ವಿಷಯನ್ನು ತಿಳಿಸಲು ಬಯಸುತ್ತೇನೆ. ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆ ಆಗಲಿ ಅಥವಾ ಪ್ರಸ್ತಾವನೆ ಆಗಲಿ ನಮ್ಮ ಮುಂದೆ ಇಲ್ಲ. ಭಾರತೀಯ ರೈಲ್ವೆ ದೇಶದ ಜನರ ಸ್ವತ್ತಾಗಿ ಉಳಿಯಲಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಭರವಸೆ ನೀಡಿದರು.

Railway
ರೈಲ್ವೆ

ನವದೆಹಲಿ: 'ಭಾರತೀಯ ರೈಲ್ವೆಯನ್ನು ಖಾಸಗೀಕರಣಕ್ಕೆ ಒಳಪಡಿಸುವ ಯೋಜನೆ ಇಲ್ಲ, ದೇಶದ ನಾಗರಿಕರ ಸ್ವತ್ತಾಗಿ ಉಳಿಯಲಿದೆ' ಎಂದು ಲೋಕಸಭೆಯಲ್ಲಿ ಕೆಲವು ಸದಸ್ಯರು ತೋರಿದ ರೈಲ್ವೆಯ ಕಾಳಜಿಗೆ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್​ ಅವರು ಪ್ರತಿಕ್ರಿಯಿಸಿದ ರೀತಿ ಇದು.

ರಾಷ್ಟ್ರೀಯ ಸಂಪರ್ಕ ಸಾಧನವಾದ ರೈಲ್ವೆ ಅಭಿವೃದ್ಧಿಗಾಗಿ ಮುಂದಿನ 12 ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದ್ದೇವೆ. ನಾನು ಸ್ಪಷ್ಟವಾಗಿ ಒಂದು ವಿಷಯನ್ನು ತಿಳಿಸಲು ಬಯಸುತ್ತೇನೆ. ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆ ಆಗಲಿ ಅಥವಾ ಪ್ರಸ್ತಾವನೆ ಆಗಲಿ ನಮ್ಮ ಮುಂದೆ ಇಲ್ಲ. ಭಾರತೀಯ ರೈಲ್ವೆ ದೇಶದ ಜನರ ಸ್ವತ್ತಾಗಿ ಉಳಿಯಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರವು ರೈಲ್ವೆಯ ಅಭಿವೃದ್ಧಿ ಹಾಗೂ ಪ್ರಯಾಣಿಕರಿಗೆ ಉತ್ತಮ ಪ್ರಯಾಣಿಕ ಸೌಕರ್ಯಗಳನ್ನು ಕಲ್ಪಿಸಿಕೊಡಲು ಕೆಲವು ಸೇವೆಗಳನ್ನು ಖಾಸಗಿ ವಲಯದೊಳಗೆ ತರುತ್ತಿದ್ದೇವೆ ಎಂದರು.

ಚರ್ಚೆಯಲ್ಲಿ ಭಾಗವಹಿಸಿದ ಹಲವು ಸಂಸದರು ರೈಲ್ವೆಯ ಕನಿಷ್ಠ ಹಣಕಾಸು ನಿರ್ವಹಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಉದ್ಯೋಗ ಅವಕಾಶಗಳ ಕುಸಿತ ಹಾಗೂ ಕೆಲವು ದೊಡ್ಡ ಯೋಜನೆಗಳ ಅನುಷ್ಠಾನ ಪೂರ್ಣಗೊಳ್ಳುವುದರಲ್ಲಿ ವಿಳಂಬ ಹಾಗೂ ರಾಷ್ಟ್ರೀಯ ವಾಹಕ ಖಾಸಗೀಕರಣಕ್ಕೆ ಒಪ್ಪಿಸುವುದರ ಬಗ್ಗೆ ಸಂಸತ್ತಿನ ಗಮನ ಸೆಳೆದರು.

ABOUT THE AUTHOR

...view details