ಕರ್ನಾಟಕ

karnataka

ಶ್ಯೂರಿಟಿ ಇಲ್ಲದೆ MSMEಗಳಿಗೆ ನಿರಂತರವಾಗಿ ಸಾಲ ಕೊಡಿ: ಬ್ಯಾಂಕ್​ಗಳಿಗೆ ಸೀತಾರಾಮನ್ ತಾಕೀತು

By

Published : Jun 9, 2020, 6:02 PM IST

ಬ್ರಾಂಚ್​ ಮಟ್ಟದಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್‌) ಫಾರ್ಮ್‌ ಮತ್ತು ಔಪಚಾರಿಕತೆ ಕನಿಷ್ಠ ಮಟ್ಟದಲ್ಲಿ ಇರಿಸಿಕೊಳ್ಳಬೇಕೆಂದು ಸೀತಾರಾಮನ್ ಅವರು ಬ್ಯಾಂಕ್​ಗಳಿಗೆ ಸಲಹೆ ನೀಡಿದ್ದಾರೆ.

Finance Minister Nirmala Sitharman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಾರ್ವಜನಿಕ ವಲಯದ ಬ್ಯಾಂಕ್​ಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ (ಪಿಎಸ್‌ಬಿ) ಪರಿಶೀಲನಾ ಸಭೆ ನಡೆಸಿದಸರು.

ಮೇಲಾಧಾರ ರಹಿತ ತುರ್ತು ಸಾಲ ಯೋಜನೆಯಡಿ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಗಳಿಗೆ (ಎಂಎಸ್‌ಎಂಇ) ಸಾಲವನ್ನು ನಿರಂತರವಾಗಿ ನೀಡುತ್ತಲೇ ಇರಿ. ಅವುಗಳ ವ್ಯವಹಾರವನ್ನು ಬೆಂಬಲಿಸಿ ಎಂದು ಪಿಎಸ್​ಬಿಗಳಿಗೆ ನಿರ್ಮಲಾ ಸೀತಾರಾಮನ್ ಅವರು ಸೂಚಿಸಿದರು.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮುಖ್ಯಸ್ಥರಿಗೆ ತಾಕೀತು ಮಾಡಿದರು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಕಚೇರಿಯು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಪಿಎಸ್‌ಬಿಗಳು ಅನುಮೋದನೆ ಮತ್ತು ಅರ್ಹ ಎಂಎಸ್‌ಎಂಇಗಳನ್ನು ತಲುಪುವತ್ತ ಗಮನಹರಿಸುವುದನ್ನು ಮುಂದುವರಿಸಲಿ. ಇತರ ವ್ಯವಹಾರಗಳ ಸಾಲದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಸಹ ಹೊಂದಿವೆ ಎಂದು ಬರೆದುಕೊಂಡಿದೆ.

ಆತ್ಮನಿರ್ಭರ ಭಾರತ ಪ್ಯಾಕೇಜ್​ ಭಾಗವಾಗಿ ಘೋಷಿಸಲಾದ ತುರ್ತು ಸಾಲ ಸೌಲಭ್ಯವು ಎಂಎಸ್ಎಂಇಗಳಿಗೆ ಮಾತ್ರವಲ್ಲದೆ ಎಲ್ಲಾ ಕಂಪನಿಗಳಿಗೂ ಈ ಯೋಜನೆ ಒಳಗೊಳ್ಳುತ್ತದೆ ಎಂದು ಹಣಕಾಸು ಸಚಿವರು ಫಿಕ್ಕಿ ಸದಸ್ಯರಿಗೆ ಸ್ಪಷ್ಟಪಡಿಸಿದ ಒಂದು ದಿನದ ಬಳಿಕ ಈ ನಿರ್ದೇಶನ ಬಂದಿದೆ.

ಬ್ರಾಂಚ್​ ಮಟ್ಟದಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್‌) ಫಾರ್ಮ್‌ ಮತ್ತು ಔಪಚಾರಿಕತೆ ಕನಿಷ್ಠ ಮಟ್ಟದಲ್ಲಿ ಇರಿಸಿಕೊಳ್ಳಬೇಕೆಂದು ಸೀತಾರಾಮನ್ ಅವರು ಬ್ಯಾಂಕ್​ಗಳಿಗೆ ಸಲಹೆ ನೀಡಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದೆ.

ABOUT THE AUTHOR

...view details