ಕೋವಿಡ್-19 ಎರಡನೇ ಅಲೆ ಹಿನ್ನೆಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾನೂನಿನಡಿ ಶಾಸನಬದ್ಧ ಮತ್ತು ನಿಯಂತ್ರಕ ಅನುಸರಣೆಗಳನ್ನು ಪೂರೈಸುವಲ್ಲಿ ತೆರಿಗೆದಾರರು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಿದೆ. ಮೇ 1, 2021ರಂದೇ ಜಾರಿಗೆ ಬಂದಿರುವ ಇವುಗಳು ತೆರಿಗೆದಾರರಿಗೆ ವಿವಿಧ ಪರಿಹಾರ ಕ್ರಮಗಳನ್ನು ಒದಗಿಸುತ್ತದೆ. ಈ ಕ್ರಮಗಳೆಂದರೆ:
ಬಡ್ಡಿದರದಲ್ಲಿ ಕಡಿತ :ವಿಳಂಬವಾದ ತೆರಿಗೆ ಪಾವತಿಗಳಿಗಾಗಿ ವಾರ್ಷಿಕ 18% ಬಡ್ಡಿದರಕ್ಕೆ ಬದಲಾಗಿ ರಿಯಾಯಿತಿ ಬಡ್ಡಿದರಗಳನ್ನು ಈ ಕೆಳಗಿನ ಸಂದರ್ಭಗಳಲ್ಲಿ ಸೂಚಿಸಲಾಗುತ್ತದೆ.
ರೂ. 5 ಕೋಟಿಗಿಂತ ಅಧಿಕ ಒಟ್ಟು ವಹಿವಾಟು ಹೊಂದಿರುವ ನೋಂದಾಯಿತ ವ್ಯಕ್ತಿಗಳಿಗೆ: ತೆರಿಗೆ ಪಾವತಿಸಬೇಕಾದ ದಿನಾಂಕದಿಂದ ಮೊದಲ 15 ದಿನಗಳವರೆಗೆ 9%ದಷ್ಟು ಕಡಿಮೆ ಬಡ್ಡಿದರ ಮತ್ತು ಅದರ ನಂತರ 18% .
ರೂ. 5 ಕೋಟಿಯಷ್ಟು ಅಧಿಕ ಒಟ್ಟು ವಹಿವಾಟು ಹೊಂದಿರುವ ನೋಂದಾಯಿತ ವ್ಯಕ್ತಿಗಳಿಗೆ: ತೆರಿಗೆ ಪಾವತಿಸಬೇಕಾದ ದಿನಾಂಕದಿಂದ ಮೊದಲ 15 ದಿನಗಳವರೆಗೆ ಬಡ್ಡಿದರವಿಲ್ಲ, ಮುಂದಿನ 15 ದಿನಗಳವರೆಗೆ 9% ಮತ್ತು ನಂತರದ 15 ದಿನ 18%.
ಸಂಯೋಜನೆ ಯೋಜನೆಯಡಿ ತೆರಿಗೆ ಪಾವತಿಸಲು ಆಯ್ಕೆ ಮಾಡಿಕೊಂಡ ನೋಂದಾಯಿತ ವ್ಯಕ್ತಿಗಳಿಗೆ: ತೆರಿಗೆ ಪಾವತಿಸಬೇಕಾದ ದಿನಾಂಕದಿಂದ ಮೊದಲ 15 ದಿನಗಳವರೆಗೆ ಬಡ್ಡಿದರವಿಲ್ಲ, ಮುಂದಿನ 15 ದಿನಗಳವರೆಗೆ 9% ಮತ್ತು ನಂತರದ 15 ದಿನ 18%.