ETV Bharat Karnataka

ಕರ್ನಾಟಕ

karnataka

ETV Bharat / business

ಉದ್ಯೋಗಿಗಳ ಸಂಬಳಕ್ಕೂ ದುಡ್ಡಿಲ್ಲ; ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ 'ಗೋಏರ್' - India business news

ವಿಮಾನಯಾನ ಸಂಸ್ಥೆಗಳು ಕೊರೊನಾ ವೈರಸ್​ ಸೃಷ್ಟಿಸಿರುವ ಈ ಮಹಾ ಬಿಕ್ಕಟ್ಟನ್ನು ಎದುರಿಸಲು ಸರ್ಕಾರಗಳಿಂದ ಸಾಕಷ್ಟು ಹಣಕಾಸಿನ ನೆರವು ಪಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ಸಂಸ್ಥೆಯ ನೌಕರರ ಅಗತ್ಯತೆಗಳನ್ನು ಪೂರೈಸಲು ಅವರಿಗೆ ಅನುವು ಮಾಡಿಕೊಡುತ್ತಿದೆ. ಈಗಾಗಲೇ ಸಂಸ್ಥೆಯ ಕೆಲವು ಉದ್ಯೋಗಿಗಳಿಗೆ ಸಂಬಳವನ್ನು ಮುಂದೂಡಿದೆ. ಇನ್ನೊಂದೆಡೆ ಕಂಪನಿಯ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಮತ್ತು ಮರುಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಗೋಏರ್ ತಿಳಿಸಿದೆ.

GoAir
ಗೋಏರ್
author img

By

Published : May 5, 2020, 12:17 PM IST

ಮುಂಬೈ: ಕೊರೊನಾ ವೈರಸ್​ ಸೃಷ್ಟಿದ ಅವಾಂತರದಿಂದಾಗಿ ಭಾರತದ ಪ್ರಮುಖ ವಾಯುಯಾನ ಸಂಸ್ಥೆ 'ಗೋಏರ್' ಸರ್ಕಾರದಿಂದ ಆರ್ಥಿಕ ನೆರವು ಕೋರಿದೆ.

ವಾಡಿಯಾ ಸಮೂಹದ ಅಧ್ಯಕ್ಷ ನುಸ್ಲಿ ವಾಡಿಯಾ ಮತ್ತು ಗೋಏರ್ ವ್ಯವಸ್ಥಾಪಕ ನಿರ್ದೇಶಕ ಜೆಹ್ ವಾಡಿಯಾ ಅವರು ತಮ್ಮ ಉದ್ಯೋಗಿಗಳೊಂದಿಗೆ ನಡೆಸಿದ ಸಂವಹನದಲ್ಲಿ, ಕೊರೊನಾ ನಿಯಂತ್ರಣಕ್ಕೆ ಬಂದು ಲಾಕ್​ಡೌನ್​ ನಿರ್ಬಂಧ ತೆಗೆದು ಹಾಕಿದ ಬಳಿಕ ವಿಮಾನಗಳನ್ನು ಪುನರಾರಂಭಿಸಲು ಸಂಸ್ಥೆ ಗಮನಹರಿಸಿದೆ ಎಂದು ತಿಳಿಸಿದ್ದಾರೆ.

ಜಗತ್ತಿನಾದ್ಯಂತ, ವಿಮಾನಯಾನ ಸಂಸ್ಥೆಗಳು ಕೊರೊನಾ ವೈರಸ್​ ಸೃಷ್ಟಿಸಿರುವ ಈ ಮಹಾ ಬಿಕ್ಕಟ್ಟನ್ನು ಎದುರಿಸಲು ಸರ್ಕಾರಗಳಿಂದ ಸಾಕಷ್ಟು ಹಣಕಾಸಿನ ನೆರವು ಪಡೆಯುತ್ತಿವೆ. ಇದರಲ್ಲೂ ಮುಖ್ಯವಾಗಿ ಸಂಸ್ಥೆಯ ನೌಕರರ ಅಗತ್ಯತೆಗಳನ್ನು ಪೂರೈಸಲು ಅವರಿಗೆ ಅನುವು ಮಾಡಿಕೊಡುತ್ತಿದೆ. ಈಗಾಗಲೇ ಸಂಸ್ಥೆಯ ಕೆಲವು ಉದ್ಯೋಗಿಗಳಿಗೆ ಸಂಬಳವನ್ನು ಮುಂದೂಡಿದೆ. ಇನ್ನೊಂದೆಡೆ ಕಂಪನಿಯ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಮತ್ತು ಮರುಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಗೋಏರ್ ತಿಳಿಸಿದೆ.

ನಮಗೆ ಇದೊಂದೇ ಆಯ್ಕೆ ಇರುವುದರಿಂದ, ನಮ್ಮ ಸರ್ಕಾರದೊಂದಿಗೆ ಇದೇ ಬೇಡಿಕೆಯನ್ನು ಮುಂದುವರಿಸುತ್ತೇವೆ. ಇದರಿಂದಾಗಿ ನಾವು ಮುಖ್ಯವಾಗಿ ನಮ್ಮ ನೌಕರರ ಸ್ಥಾನವನ್ನು ಸುಧಾರಿಸಬಹುದು ಮತ್ತು ನಮ್ಮ ವಿಮಾನಯಾನ ಸಂಸ್ಥೆಯ ಸುಸ್ಥಿರತೆಯನ್ನೂ ಸಹ ಕಾಪಾಡಬಹುದು ಎಂದು ಅದು ಹೇಳಿದೆ.

ಫೆಡರಲ್ ಬ್ಯಾಂಕ್​ಗಳು ನೀಡುವ ಸಹಾಯದಿಂದ ಈ ವಿಮಾನಯಾನ ಸಂಸ್ಥೆಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಗಳಿಂದ ಸಾಕಷ್ಟು ಬೆಂಬಲ ಸಿಕ್ಕಿದೆ ಎಂದು ವಾಯುಯಾನ ಸಂಸ್ಥೆ ಹೇಳಿದೆ.

ಈಗಾಗಲೇ ಆರ್ಥಿಕ ಸಹಾಯಕ್ಕಾಗಿ ವಿಮಾನಯಾನ ಸಂಸ್ಥೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೋರಿದೆ. ಆದರೆ ಆರ್‌ಬಿಐನ ವಿವಿಧ ಸಲಹೆಗಳ ಹೊರತಾಗಿಯೂ ವಿಮಾನಯಾನ ಸಂಸ್ಥೆಗಳಿಗೆ ಬ್ಯಾಂಕ್​ಗಳು ಹೇಗೆ ಆರ್ಥಿಕವಾಗಿ ಬೆಂಬಲ ನೀಡಬೇಕು ಎನ್ನುವ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಗೋಏರ್ ಹೇಳಿದೆ.

ಮಾರ್ಚ್ ಮೊದಲ 17 ರಿಂದ 24 ದಿನಗಳಲ್ಲಿ ವಿಮಾನಯಾನವು ಬಹಳ ಕಡಿಮೆ ಆದಾಯ ಗಳಿಸಿತ್ತು. ಅದಾದ ನಂತರದ ಯಾವುದೇ ಆದಾಯ ಗಳಿಸಿಲ್ಲ. ಸಂಸ್ಥೆಯು ತನ್ನ ಪಾಲುದಾರರು, ಇಂಧನ ಮತ್ತು ಎಂಜಿನಿಯರಿಂಗ್ ಸರಬರಾಜುದಾರರು, ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ವೆಚ್ಚಗಳನ್ನು ಭರಿಸಬೇಕಾಗಿದೆ. ಅಲ್ಲದೆ ತನ್ನೆಲ್ಲಾ ಹೊಣೆಗಾರಿಕೆಗಳನ್ನು ನಿಭಾಯಿಸಬೇಕಾಗಿದೆ ಎಂದು ತಿಳಿಸಿದೆ.

ಕೋವಿಡ್​-19 ನಿಗ್ರಹಿಸಲು ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಲಾಗಿದೆ. ಅಂದಿನಿಂದದ್ದು, ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ.

ABOUT THE AUTHOR

...view details