ಕರ್ನಾಟಕ

karnataka

ವಿಆರ್​ಎಸ್​ಗೆ ಒತ್ತಡ: ಬಿಎಸ್​ಎನ್​ಎಲ್​ ಉದ್ಯೋಗಿಗಳಿಂದ ದೇಶಾದ್ಯಂತ ಉಪವಾಸ ಸತ್ಯಾಗ್ರಹ..!

ಸಂಸ್ಥೆಯ ಕೆಲ ಧೋರಣೆಗಳನ್ನು ವಿರೋಧಿಸಿ ಬಿಎಸ್​ಎನ್​​ಎಲ್​ ಉದ್ಯೋಗಿಗಳು ಇಂದಿನಿಂದ ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

By

Published : Nov 25, 2019, 8:46 AM IST

Published : Nov 25, 2019, 8:46 AM IST

ಬಿಎಸ್​ಎನ್​ಎಲ್

ನವದೆಹಲಿ:ಬಿಎಸ್​ಎನ್​ಎಲ್​ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ(ವಿಆರ್​ಎಸ್​) ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ಉದ್ಯೋಗಿಗಳು ಇಂದಿನಿಂದ ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಬಿಎಸ್​ಎನ್​ಎಲ್​ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 58 ಇಳಿಸುವ ಬೆದರಿಕೆ ಹಾಕಿದೆ. ನಾವು ವಿಆರ್​ಎಸ್ ವಿರೋಧಿಸುತ್ತಿಲ್ಲ. ಆದರೆ ಕೆಳಹಂತದಲ್ಲಿರುವ ಉದ್ಯೋಗಿಗಳಿಗೆ ವಿಆರ್​ಎಸ್ ಆಯ್ಕೆ ಅತ್ಯಂತ ಕಷ್ಟಕರವಾಗಿದೆ. ಸಂಸ್ಥೆಯ ಈ ನಡೆ ಎಲ್ಲ ಉದ್ಯೋಗಿಗಳ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಆಲ್​ ಇಂಡಿಯಾ ಯೂನಿಯನ್ಸ್ ಆ್ಯಂಡ್ ಅಸೋಸಿಯೇಷನ್ಸ್ ಆಫ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​​ ಸಂಯೋಜಕ ಪಿ.ಅಭಿಮನ್ಯು ಹೇಳಿದ್ದಾರೆ.

ಯೂನಿಯನ್​ ಹೇಳುವಂತೆ, ವಿಆರ್​ಎಸ್​ ಆಯ್ಕೆ ಮಾಡಿಕೊಳ್ಳುವ ಉದ್ಯೋಗಿಗಳಿಗೆ ಪಿಂಚಣಿ ದೊರೆಯುವುದಿಲ್ಲ. ಕನಿಷ್ಠ ಮೊತ್ತದ ಕುಟುಂಬ ಪಿಂಚಣಿ ಮಾತ್ರವೇ ದೊರೆಯುತ್ತದೆ ಎಂದಿದೆ.

1.6 ಲಕ್ಷದಲ್ಲಿ 77,000 ಉದ್ಯೋಗಿಗಳು ವಿಆರ್​ಎಸ್​ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬಿಎಸ್​ಎನ್​ಎಲ್​ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪರ್ವಾರ್​​ ಹೇಳಿದ್ದಾರೆ.

ABOUT THE AUTHOR

...view details