ಕರ್ನಾಟಕ

karnataka

By

Published : Jun 19, 2021, 10:14 PM IST

ETV Bharat / briefs

ಕಲ್ಲಿದ್ದಲು ಗಣಿಗೆ ಇದ್ದಕ್ಕಿದ್ದಂತೆ ಹರಿದು ಬಂದ ನೀರು : ಕಾರ್ಮಿಕರ ಸ್ಥಳಾಂತರ

ಸದ್ಯಕ್ಕೆ ಗಣಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳು ಯಾವಾಗ ಪುನಾರಂಭಗೊಳ್ಳುತ್ತವೆ ಎಂಬುವುದು ಇನ್ನೂ ಕೂಡ ಖಚಿತಗೊಂಡಿಲ್ಲ..

mine
mine

ಅಸನ್ಸೋಲ್ (ಪಶ್ಚಿಮ ಬಂಗಾಳ):ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಇಸಿಎಲ್) ನರ್ಸೊಮುಡಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ವೇಳೆ ಶನಿವಾರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ಪಕ್ಕದ ಅಕ್ರಮ ಕಲ್ಲಿದ್ದಲು ಗಣಿಯಿಂದ ನೀರು ವೇಗವಾಗಿ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಎಲ್ಲಾ ಕಾರ್ಮಿಕರನ್ನು ಶೀಘ್ರವಾಗಿ ಸ್ಥಳಾಂತರಿಸಲಾಯಿತು ಮತ್ತು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ವರದಿಯಾಗಿಲ್ಲ.

ಸದ್ಯಕ್ಕೆ ಗಣಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳು ಯಾವಾಗ ಪುನಾರಂಭಗೊಳ್ಳುತ್ತವೆ ಎಂಬುವುದು ಇನ್ನೂ ಕೂಡ ಖಚಿತಗೊಂಡಿಲ್ಲ.

ABOUT THE AUTHOR

...view details