ಕರ್ನಾಟಕ

karnataka

ETV Bharat / briefs

ಬಾರ್ ಕೌನ್ಸಿಲ್‌ ಅಧ್ಯಕ್ಷೆಯನ್ನು ಗುಂಡಿಕ್ಕಿ ಕೊಲೆಗೈದ ವಕೀಲ! - ಬಾರ್​ ಕೌನ್ಸಿಲ್​

ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ವಕೀಲನೊಬ್ಬ ಬಾರ್​ ಕೌನ್ಸಿಲ್​ ಅಧ್ಯಕ್ಷೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಬಾರ್​ ಕೌನ್ಸಿಲ್​ ಅಧ್ಯಕ್ಷೆ

By

Published : Jun 12, 2019, 6:03 PM IST

ಆಗ್ರಾ:ಉತ್ತರಪ್ರದೇಶದ ಬಾರ್​ ಕೌನ್ಸಿಲ್​ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ದರವೀಶ್​ ಪುಷ್ಪಾಂಜಲಿ ಯಾದವ್​ ಅವರನ್ನು ವಕೀಲನೊಬ್ಬ ಹಾಡಹಗಲೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಹೊಸದಾಗಿ ಆಯ್ಕೆಯಾಗಿದ್ದ ಮಹಿಳಾ ಬಾರ್​ ಕೌನ್ಸಿಲ್​ ಅಧ್ಯಕ್ಷೆ ದರವೀಶ್​ಪುಷ್ಪಾಂಜಲಿ ಯಾದವ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಕೆಯ ಮೇಲೆ ಕೋರ್ಟ್​ನ ವಕೀಲನೋರ್ವ ಗುಂಡಿನ ಸುರಿಮಳೆಗೈದಿದ್ದಾನೆ. ತದನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ಮಾಡಿರುವ ವಕೀಲನನ್ನು ಮನೀಷ್​ ಶರ್ಮಾ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೊಳಗಾಗಿದ್ದರು.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details