ಕರ್ನಾಟಕ

karnataka

By

Published : May 11, 2019, 10:09 AM IST

ETV Bharat / briefs

ಅಚ್ಚರಿಯ ಪಂಚಮುಖ.. ವಿಶ್ವಕಪ್​ನ ಟಾಪ್​ 5 ಡಾರ್ಕ್‌ಹಾರ್ಸ್‌ ಕ್ರಿಕೆಟರ್‌ಗಳು..

ಭಾರತ ಸೇರಿ ಹಲವು ತಂಡಗಳು ವಿಶ್ವಕಪ್​ ಗೆಲ್ಲುವ ದೃಷ್ಟಿಯಿಂದ ಕಳೆದ 4 ವರ್ಷಗಳಿಂದ ತಂಡ ಸಿದ್ದಪಡಿಸಿಕೊಂಡಿವೆ. ಆದರೆ, ಕೊನೆಯ ಹಂತದಲ್ಲಿ ಕೆಲ ಆಟಗಾರರನ್ನು ಕೈಬಿಟ್ಟು, ಹೊಸ ಪ್ರತಿಭೆಗಳಿಗೆ ಮಣೆಯಾಕುವ ಮೂಲಕ ಎಲ್ಲಾ ತಂಡಗಳೂ ಅಚ್ಚರಿಗೆ ಕಾರಣವಾಗಿವೆ.

ವಿಶ್ವಕಪ್​

ಮುಂಬೈ: ಇಂಗ್ಲೆಂಡ್​ನಲ್ಲಿ 50 ದಿನಗಳಿಗೂ ಹೆಚ್ಚು ನಡೆಯಲಿರುವ ಕ್ರಿಕೆಟ್​ನ ಮಹಾಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದ ಏಕದಿನ ಕ್ರಿಕೆಟ್​ನ ಟಾಪ್​10 ತಂಡಗಳು ತಮ್ಮ 15 ಸದಸ್ಯರ ತಂಡವನ್ನು ಘೋಷಿಸಿದ್ದು ಅದರಲ್ಲಿ ಕೆಲವು ಆಟಗಾರರ ಆಯ್ಕೆ ಅಚ್ಚರಿಗೆ ಕಾರಣವಾಗಿವೆ.

ಭಾರತ ಸೇರಿ ಹಲವು ತಂಡಗಳು ವಿಶ್ವಕಪ್​ ಗೆಲ್ಲುವ ದೃಷ್ಟಿಯಿಂದ ಕಳೆದ 4 ವರ್ಷಗಳಿಂದ ತಂಡವನ್ನು ಸಿದ್ದಪಡಿಸಿಕೊಂಡಿವೆ. ಆದರೆ, ಕೊನೆಯ ಹಂತದಲ್ಲಿ ಕೆಲ ಆಟಗಾರರನ್ನು ಕೈಬಿಟ್ಟು, ಹೊಸ ಪ್ರತಿಭೆಗಳಿಗೆ ಮಣೆಯಾಕುವ ಮೂಲಕ ಅಚ್ಚರಿಗೆ ಕಾರಣವಾಗಿವೆ.

ವಿಜಯ್​ ಶಂಕರ್​:

ವಿಜಯ್​ ಶಂಕರ್​

ಕೇವಲ 9 ಪಂದ್ಯವನ್ನಾಡಿರುವ ತಮಿಳುನಾಡಿನ ವಿಜಯ್​ ಶಂಕರ್​ ವಿಶ್ವಕಪ್​ನಂತಹ ದೊಡ್ಡ ಮಟ್ಟದ ಟೂರ್ನಿಗೆ ಆಯ್ಕೆ ಮಾಡಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಚಾಂಪಿಯನ್​​ ಟ್ರೋಪಿ ನಂತರ ಬಿಸಿಸಿಐ 4ನೇ ಕ್ರಮಾಂಕಕ್ಕೆ ಸಾಕಷ್ಟು ಸರ್ಕಸ್​ ನಡೆಸಿತ್ತು. ಶ್ರೇಯಸ್​ ಅಯ್ಯರ್​,ರಾಯುಡು, ಕಾರ್ತಿಕ್​ ಹಾಗೂ ಪಂತ್​ ಸೇರಿದಂತೆ ಹಲವರಿಗೆ ಅವಕಾಶ ನೀಡಲಾಗಿತ್ತು. ವಿಜಯ್​ ಶಂಕರ್​ ಬ್ಯಾಟಿಂಗ್​, ಬೌಲಿಂಗ್​ ಜೊತೆಗೆ ಅತ್ಯುತ್ತಮ ಫೀಲ್ಡರ್​ ಕೂಡ ಆಗಿರುವುದರಿಂದ ವಿಶ್ವಕಪ್​ನಲ್ಲಿ ಆಡುವ ಅವಕಾಶ ನೀಡಲಾಗಿದೆ.

ಶಾಹೀನ್​ ಅಫ್ರಿದಿ​:

ಶಾಹೀನ್​ ಆಫ್ರಿದಿ

19 ವರ್ಷದ ಪಾಕಿಸ್ತಾನದ ಯುವ ಬೌಲರ್​ ಶಾಹೀನ್​ ಅಫ್ರಿದಿ ಕಳೆದ ವರ್ಷದ ಅಂಡರ್​ 19 ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದರು. ಕೇವಲ 11 ಏಕದಿನ ಪಂದ್ಯಗಳನ್ನಾಡಿದ್ದು 19 ವಿಕೆಟ್​ ಪಡೆದಿದ್ದಾರೆ. ಮೊಹಮ್ಮದ್​ ಅಮೀರ್​,ಉಸ್ಮಾನ್​ ಶೆನ್ವಾರಿ ಹಾಗೂ ವಹಾಬ್​ ರಿಯಾಜ್​ರಂತಹ ಅನುಭವಿಗಳನ್ನು ತಂಡದಿಂದ ಕೈಬಿಟ್ಟು ಶಾಹೀನ್​ ಅಫ್ರಿದಿಗೆ ಲಂಡನ್‌ ಟಿಕೆಟ್ ನೀಡಲಾಗಿದೆ.

ಮೊಹಮ್ಮದ್​ ಹಸ್ನೈನ್:

ಶಾಹೀನ್​ ಅಫ್ರಿದಿಯಲ್ಲದೆ ಕೇವಲ 3 ಪಂದ್ಯಗಳನ್ನಾಡಿದ್ದ 18 ವರ್ಷದ ಮೊಹಮ್ಮದ್​ ಹಸ್ನೈನ್​ರನ್ನ ಇಂಜಮಾಮ್​ ಉಲ್​ ಹಕ್​ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿರುವುದು ಪಾಕ್‌ ಕ್ರಿಕೆಟ್​ ಪ್ರೇಮಿಗಳು ಹಾಗೂ ಮಾಜಿ ಆಟಗಾರರಿಗೂ ಆಶ್ಚರ್ಯ ತರಿಸಿದೆ.

ರಾಸ್ಸಿ ವಾನ್ ಡೆರ್ ಡಸೆನ್:

ವಾನ್​ ಡೆರ್​ ಡಾಸ್ಸೆನ್​

ದಕ್ಷಿಣ ಆಫ್ರಿಕಾ ತಂಡದ ಪರ ಕೇವಲ 9 ಏಕದಿನ ಪಂದ್ಯಗಳನ್ನಾಡಿರುವ ವಾನ್​ ಡೆರ್​ ಡಾಸ್ಸೆನ್​ರನ್ನ ವಿಶ್ವಕಪ್​ಗೆ ಆಯ್ಕೆ ಮಾಡಲಾಗಿದೆ. ಹಲವು ದೇಶಗಳ ಟಿ20 ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಆದರೆ, ಉತ್ತಮ ಪ್ರದರ್ಶನ ತೋರಿದ ರೀಜಾ ಹೆಂಡ್ರಿಕ್ಸ್​ರನ್ನ ಕಡೆಗಣಿಸಿ ಟೀಕೆ ಗುರಿಯಾಗಿದೆ.

ಅಬು ಜಾಯೇದ್:

ಅಬು ಜಾಯೇದ್​

ಬಾಂಗ್ಲಾದೇಶ ಕ್ರಿಕೆಟ್​ ಆಯ್ಕೆ ಸಮಿತಿ ಅಬು ಜಾಯೇದ್‌ರನ್ನ ಆಯ್ಕೆ ಮಾಡುವ ಮೂಲಕ ಬಾಂಗ್ಲಾ ಅಭಿಮಾನಿಗಳಿಗೆ ಶಾಕ್ ತಂದಿದೆ. ಏಕೆಂದರೆ ಅಬು ಜಾಯೇದ್​ ಈವರೆಗೂ ಒಂದೇ ಒಂದು ಏಕದಿನ ಪಂದ್ಯವಾಡಿಲ್ಲ. ಈತನಿಗೆ ವಿಶ್ವಕಪ್​ ಪಂದ್ಯವೇ ಪಾದಾರ್ಪಣೆ ಪಂದ್ಯವಾಗಲಿದೆ. ಅದರಲ್ಲೂ ತಸ್ಕಿನ್​ ಅಹ್ಮದ್‌ರಂತಹ ಸೀನಿಯರ್​ ಬೌಲರ್​ಗಳನ್ನು ಕಡೆಗಣಸಿ ಜಾಯೇದ್​ ಆಯ್ಕೆ ಮಾಡಿರುವುದಕ್ಕೆ ಬಾಂಗ್ಲಾ ಕ್ರಿಕೆಟ್​ ಮಂಡಳಿ ಟೀಕೆಗೆ ಗುರಿಯಾಗಿದೆ.

ಟಾಮ್​ ಬ್ಲಂಡೆಲ್​​:

ಟಾಮ್​ ಬ್ಲಂಡೆಲ್​

ಕಿವೀಸ್​ನ ವಿಕೆಟ್​ ಕೀಪರ್​ ಟಾಮ್​ ಬ್ಲಂಡೆಲ್​ ಆಯ್ಕೆಯೂ ಕೂಡ ಆಶ್ಚರ್ಯಕ್ಕೆ ಕಾರಣವಾಗಿದೆ. ಟಾಮ್​ ಕೇವಲ 2 ಟೆಸ್ಟ್​ ಹಾಗೂ 3 ಟಿ20 ಪಂದ್ಯ ಆಡಿದ್ದಾರೆ. ಈತನಿಗೂ ಕೂಡ ವಿಶ್ವಕಪ್​ ಪಂದ್ಯವೇ ಪಾದಾರ್ಪಣೆ ಪಂದ್ಯವಾಗಲಿದೆ.

ABOUT THE AUTHOR

...view details