ಕರ್ನಾಟಕ

karnataka

ETV Bharat / briefs

ಒಂದೇ ಗ್ರಾಮದ ಮೂವರು ಮಕ್ಕಳು ದಿಢೀರ್​ ನಾಪತ್ತೆ: ಪೋಷಕರು ಕಂಗಾಲು - undefined

ಶಾಲೆ ಮುಗಿಸಿ ಮನೆಗೆ ಬರದೇ ಆಟವಾಡಲು ಹೋದ ಒಂದೇ ಹಳ್ಳಿಯ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಪರಿಯಾಪಟ್ಟಣ ತಾಲೂಕಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಕಂಗಾಲಾಗಿದ್ದಾರೆ.

ನಾಪತ್ತೆಯಾದ ಮಕ್ಕಳು

By

Published : May 31, 2019, 5:19 PM IST

ಮೈಸೂರು: ಶಾಲೆ ಮುಗಿಸಿ ಮನೆಗೆ ಬಾರದೆ ಆಟ ಆಡಲು ಹೋಗಿದ್ದ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೆ.ಸಿ. ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ನಿನ್ನೆ ಸಂಜೆ ಶಾಲೆ ಮುಗಿಸಿದ ಬಳಿಕ ಮಕ್ಕಳು ಮನೆಗೆ ಹಿಂದಿರುಗದೇ ಬಸ್ ನಿಲ್ದಾಣದ ಬಳಿ ಇರುವ ಮೈದಾನದಲ್ಲಿ ಆಟವಾಡುತ್ತಿದ್ದರು. ಆಟದ ಮುಗಿಸಿ ಮನೆಗೆ ಬರದೆ ಆದಿತ್ಯ ಅರಸ್ (13), ಪ್ರದೀಪ್ (11) ಮತ್ತು ಪವನ್ (10) ಈ ಮೂವರು ವಿದ್ಯಾರ್ಥಿಗಳು ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡಿರುವ ಪೋಷಕರು ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details