ನವದೆಹಲಿ: ಲಸಿಕೆ ಬಿಕ್ಕಟ್ಟಿನ ಮೇಲ್ವಿಚಾರಣೆಗೆ ಸಮಿತಿಯನ್ನು ರಚಿಸುವಂತೆ ಹಾಗೂ ಕೋವಿಡ್ 19 ರ ಮೂರನೇ ಅಲೆಯನ್ನು ನಿಭಾಯಿಸಲು ಸರ್ಕಾರದ ಸಿದ್ಧತೆಯನ್ನು ಪರಿಶೀಲಿಸುವಂತೆ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಸೇರಿದಂತೆ ಇತರೆ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಸರ್ಕಾರದ ಅವೈಜ್ಞಾನಿಕ ವಿಧಾನ ಮತ್ತು ದೂರದೃಷ್ಟಿಯ ಕೊರತೆ ಈ ಪ್ರಸ್ತುತ ದುರಂತಕ್ಕೆ ಕಾರಣವಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ರಕ್ಷಿಸಲು ಸರ್ಕಾರವು ಇನ್ನೂ ಯಾವುದೇ ಕ್ರಿಯಾ ಯೋಜನೆ ಅಥವಾ ಸೂತ್ರವನ್ನು ಈವರೆಗೆ ಹೊಂದಿಲ್ಲ. ಹಾಗೆಯೇ ಭಾರತವು 165 ದಶಲಕ್ಷಕ್ಕಿಂತ ಹೆಚ್ಚು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿದೆ. ಈ ಸಂಬಂಧ ಎಚ್ಚರಿಕೆಯನ್ನು ವಹಿಸಬೇಕು ಎಂದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.