ಕರ್ನಾಟಕ

karnataka

ಹೊಸಪೇಟೆ: ಕೊರೊನಾಗೆ ಬಲಿಯಾದ ಶಿಕ್ಷಕ

By

Published : May 18, 2021, 10:34 PM IST

ಹೊಸಪೇಟೆ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸೈಯದ್ ಹುಸೇನ್ ಎಂಬುವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

Hospete
Hospete

ಹೊಸಪೇಟೆ:ತಾಲೂಕಿನ ಕಾರಿಗನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕ ಕೊರೊನಾಗೆ ಬಲಿಯಾಗಿದ್ದಾರೆ.

ಸೈಯದ್ ಹುಸೇನ್ (50) ಮೃತ ಶಿಕ್ಷಕ. ಕಳೆದ ದಿನಗಳ ಹಿಂದೆ ಹುಸೇನ್ ಅವರಿಗೆ ಕೊರೊ‌ನಾ ಪಾಟಿಸಿವ್ ಕಂಡು ಬಂದಿತ್ತು. ಬಳಿಕ ಅವರನ್ನು ಕೊಪ್ಪಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಹುಸೇನ್ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು‌. ಇಂಗ್ಲಿಷ್ ಶಿಕ್ಷಕನಾಗಿ ಸಾಹಿತ್ಯಾಸಕ್ತಿ ಹೊಂದಿದ್ದರು. ಹಾಗಾಗಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹುಡುಕಿಕೊಂಡು ಬಂದಿತ್ತು. ಅವರು ಮೂಲತಃ ಹೂವಿನ ಹಡಗಲಿಯವರಾಗಿದ್ದಾರೆ.

ABOUT THE AUTHOR

...view details