ಕರ್ನಾಟಕ

karnataka

By

Published : Jun 2, 2021, 9:25 AM IST

Updated : Jun 2, 2021, 9:34 AM IST

ETV Bharat / briefs

ಕೋವಿಡ್​ ಕೇಂದ್ರದಲ್ಲಿ ಡೊಳ್ಳು ಬಾರಿಸಿ ಸೋಂಕಿತರಿಗೆ ಮನರಂಜನೆ ನೀಡಿದ ಸುರಪುರ ಶಾಸಕ

ಹುಣಸಗಿ ತಾಲೂಕಿನ ರಾಜನಕೋಳೂರು ಕೊಡೆಕಲ್ ಮಧ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಶಾಸಕ ನರಸಿಂಹನಾಯಕ ರಾಜುಗೌಡ ಡೊಳ್ಳು ಬಾರಿಸುವ ಮೂಲಕ ಸೋಂಕಿತರಿಗೆ ಮನರಂಜನೆ ನೀಡಿದರು.

ಸುರಪುರ

ಸುರಪುರ:ಕೋವಿಡ್​ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಮನರಂಜನೆಯ ಮೂಲಕ ಆತ್ಮಸ್ಥೈರ್ಯ ತುಂಬಲು ಶಾಸಕ ನರಸಿಂಹ ನಾಯಕ ರಾಜುಗೌಡ ಮುಂದಾಗಿದ್ದಾರೆ.

ಸೋಂಕಿತರಿಗೆ ಮನರಂಜನೆ ನೀಡಿದ ಸುರಪುರ ಶಾಸಕ

ಹುಣಸಗಿ ತಾಲೂಕಿನ ರಾಜನಕೋಳೂರು ಕೊಡೆಕಲ್ ಮಧ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಶಾಸಕ ನರಸಿಂಹನಾಯಕ ರಾಜುಗೌಡ ಡೊಳ್ಳು ಬಾರಿಸುವ ಮೂಲಕ ಸೋಂಕಿತರಿಗೆ ಮನರಂಜನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಡೊಳ್ಳು ಕುಣಿತವನ್ನು ಪ್ರದರ್ಶಿಸುತ್ತಿದ್ದರೆ, ಇದನ್ನು ಕಂಡ ಕೊರೊನಾ ಸೋಂಕಿತರು ಶಾಸಕ ರಾಜುಗೌಡ ತಮಗಾಗಿ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಶಾಸಕರು ನಮಗಾಗಿ ಇಂತಹ ಕಾರ್ಯ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Jun 2, 2021, 9:34 AM IST

ABOUT THE AUTHOR

...view details