ಕರ್ನಾಟಕ

karnataka

ETV Bharat / briefs

ಗೆಲುವಿಗಾಗಿ ದೇವರ ಮೊರೆ ಹೋದ ಸನ್ನಿ ಡಿಯೋಲ್​

ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್​ ಇಂದು ಗುರುದ್ವಾರ ದೇರಾ ಬಾಬಾ ನಾನಕ್​​​ಗೆ ಭೇಟಿ ನೀಡಿ  ದೇರಾ ಬಾಬಾ ನಾನಕ್​ ಅವರ ಆಶೀರ್ವಾದ ಪಡೆದರು.

By

Published : May 2, 2019, 10:06 AM IST

ಸನ್ನಿ ಡಿಯೋಲ್​

ಗುರುದಾಸಪುರ( ಪಂಜಾಬ್​): ಬಿಜೆಪಿ ಈ ಬಾರಿ ಗುರುದಾಸಪುರ ಸಂಸತ್​ ಸ್ಥಾನಕ್ಕೆ ನಟ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಿದೆ. ಒಂದೆಡೆ ಕ್ರಿಕೆಟರ್​ ನವಜೋತ್ ಸಿಧು ಬಿಜೆಪಿ ತ್ಯಜಿಸಿ ಪ್ರಧಾನಿ ವಿರುದ್ಧ ತೊಡೆ ತಟ್ಟಿದ್ದರೆ, ಇತ್ತ ಬಿಜೆಪಿ ಮತ್ತೊಬ್ಬ ಪ್ರಭಾವಿ ನಟನಿಗೆ ಮಣೆ ಹಾಕುವ ಮೂಲಕ ಪಂಜಾಬ್​ನಲ್ಲಿ ನವಜೋತ್​ ಸಿಧುಗೆ ಟಾಂಗ್​ ಕೊಡಲು ಅಣಿ ಆಗಿದೆ.

ಅಂದಹಾಗೆ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್​ ಇಂದು ಗುರುದ್ವಾರ ದೇರಾ ಬಾಬಾ ನಾನಕ್​​​ಗೆ ಭೇಟಿ ನೀಡಿ ದೇರಾ ಬಾಬಾ ನಾನಕ್​ ಅವರ ಆಶೀರ್ವಾದ ಪಡೆದರು.

ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಸನ್ನಿ ಡಿಯೋಲ್​, ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಪ್ರಾರ್ಥಿಸಿದರು.

ABOUT THE AUTHOR

...view details