ಕರ್ನಾಟಕ

karnataka

ETV Bharat / briefs

ಸೂಫಿ ಸಂತರ ಬಗ್ಗೆ ಅವಹೇಳನ ಆರೋಪ.. ಖಾಸಗಿ ಸುದ್ದಿ ವಾಹಿನಿಯ ನಿರೂಪಕನ ವಿರುದ್ಧ ಪ್ರತಿಭಟನೆ - Shivamogga district news

ಅಮೀಶ್ ದೇವಗನ್ ಅವರು ಸೂಫಿ ಸಂತರಾದ ಹಜರತ್ ಖ್ವಾಜಾ ಗರೀಬ್ ನವಾಜ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಇಡೀ ಸಮುದಾಯಕ್ಕೆ ನೋವನ್ನುಂಟು ಮಾಡಿದ್ದಾರೆ...

Sunni Jamiatul Ulma Organization protest
Sunni Jamiatul Ulma Organization protest

By

Published : Jun 22, 2020, 3:24 PM IST

ಶಿವಮೊಗ್ಗ :ಖಾಸಗಿ ಸುದ್ದಿ ವಾಹಿನಿಯ ನಿರೂಪಕ ಅಮೀಶ್ ದೇವಗನ್, ಸೂಫಿ ಸಂತ ಹಜರತ್ ಖ್ವಾಜಾ ಗರೀಬ್ ನವಾಜ್ ಅವರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿಂದು ಸುನ್ನಿ ಜಮೈತುಲ್ ಉಲ್ಮ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದರು.

ಅಮೀಶ್ ದೇವಗನ್ ಅವರು ಸೂಫಿ ಸಂತರಾದ ಹಜರತ್ ಖ್ವಾಜಾ ಗರೀಬ್ ನವಾಜ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಇಡೀ ಸಮುದಾಯಕ್ಕೆ ನೋವನ್ನುಂಟು ಮಾಡಿದ್ದಾರೆ. ಹಾಗಾಗಿ ನಿರೂಪಕ ಅಮೀಶ್ ದೇವಗನ್ ಅವರ ವಿರುದ್ಧ ಐಪಿಸಿ ಕಲಂ ಅಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಸುದ್ದಿವಾಹಿನಿಯ ಪರವಾನಿಗೆ ರದ್ದುಪಡಿಸಲು ಸರ್ಕಾರ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ABOUT THE AUTHOR

...view details