ಕರ್ನಾಟಕ

karnataka

By

Published : Jun 20, 2020, 11:00 PM IST

ETV Bharat / briefs

ಸೂರ್ಯಗ್ರಹಣ: ಮಧ್ಯಾಹ್ನದ ಬಳಿಕ ಧಾರವಾಡ ಸೋಮೇಶ್ವರ ದರ್ಶನ ಭಾಗ್ಯ!

ನಾಳೆ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 10:04 ರಿಂದ ಮಧ್ಯಾಹ್ನ 1:28ವರೆಗೆ ದೇವರ ದರ್ಶನ ಇರುವುದಿಲ್ಲ.

Solar eclipse dharwad someshwara temple closed
Solar eclipse dharwad someshwara temple closed

ಧಾರವಾಡ :ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ಸೋಮೇಶ್ವರ ದೇಗುಲದಲ್ಲಿ ಗ್ರಹಣ ಕಾಲ ಮುಗಿಯುವವರೆಗೂ ಭಕ್ತರಿಗೆ ದೇವರ ದರ್ಶನವಿರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ಸೋಮೇಶ್ವರ ದೇವಾಲಯ
ಬೆಳಿಗ್ಗೆ 10:04 ರಿಂದ ಮೋಕ್ಷ ಕಾಲ ಮಧ್ಯಾಹ್ನ 1:28ರವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಇರುವುದಿಲ್ಲ. ಬಳಿಕ ದೇವರಿಗೆ ಅಭಿಷೇಕ ಮತ್ತು ಅಲಂಕಾರಾಧಿಗಳನ್ನು ನೆರವೇರಿಸಿದ ಮೇಲೆ ದೇವರ ದರ್ಶನ ಪಡೆಯಬಹುದು. ಭಕ್ತರು ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರಕ್ಕೆ ಸಹಕರಿಸಬೇಕು ಎಂದು ಸೋಮೇಶ್ವರ ದೇವಸ್ಥಾನ ಅರ್ಚಕರು ಹೇಳಿದ್ದಾರೆ.

ABOUT THE AUTHOR

...view details