ಕರ್ನಾಟಕ

karnataka

ETV Bharat / briefs

ತಪ್ಪಾಗಿ ಖಾತೆಗೆ ಬಂದ ಹಣ ಹಿಂದುರುಗಿಸಿ ಮಾನವೀಯತೆ ಮೆರೆದ ಚಾಚಾ - undefined

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಜಯ್​ ಹೋಮ್​ ನೀಡ್ಸ್ ಶೋ ರೂಮ್​ ಅಕೌಂಟ್​ಗೆ ಬರಬೇಕಿದ್ದ 14 ಸಾವಿರ ಹಣವೂ ಅಕೌಂಟ್​ ನಂಬರ್​ ತಪ್ಪಾಗಿ ನಮೂದಿಸಿದ್ದರಿಂದ ರೂಡಿಗಿ ಗ್ರಾಮದ ಸಾಹೇಬ ಪಟೇಲರ ಖಾತೆಗೆ

ಮಾವವೀಯತೆ ಮೆರೆದ ಸಾಹೇಬ ಪಟೇಲ್ ಚಾಚಾ 14 ಸಾವಿರ ಹಿಂದಿರುಗಿಸುತ್ತಿರುವುದು

By

Published : Jun 16, 2019, 10:24 AM IST

Updated : Jun 16, 2019, 10:31 AM IST

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಸುಜಯ್ ಹೋಮ್ಸ್ ನೀಡ್ಸ್ ಶೋ ರೂಮ್​ ಅಕೌಂಟ್​ಗೆ ಹಾಕಿದ ₹14 ಸಾವಿರ ಹಣವು ಖಾತೆ​ ಸಂಖ್ಯೆ​ ತಪ್ಪಾಗಿದ್ದರಿಂದ ರೂಡಿಗಿ ಗ್ರಾಮದ ಸಾಹೇಬ ಪಟೇಲ್​ ಎಂಬುವವರ ಖಾತೆಗೆ ಜಮಾ ಆಗಿತ್ತು.

ಮಾವವೀಯತೆ ಮೆರೆದ ಸಾಹೇಬ ಪಟೇಲ್ ಚಾಚಾ 14 ಸಾವಿರ ಹಿಂದಿರುಗಿಸುತ್ತಿರುವುದು

ಯುನಿಯನ್ ಬ್ಯಾಂಕ್​ನಲ್ಲಿ ವಿಚಾರಿಸಿ ಗ್ರಾಹಕ ಪಟೇಲ್​ ಅವರ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು ಅವರಿಗೆ ಕರೆ ಮೂಲಕ ಸಂಪರ್ಕಿಸಲಾಗಿದೆ. ಕೂಡಲೇ ಖಾತೆಯ​ ವಿವರ ಪಡೆದ ಸಾಹೇಬ ಪಟೇಲರು ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡದ್ದಾರೆ.

ರಂಜಾನ್ ಮುಗಿಸಿ ಖುದ್ದಾಗಿ ಸಾಹೇಬ ಪಟೇಲರು ಶೋ ರೂಮ್​ಗೆ ಹೋಗಿ ಅವರ ಹಣವನ್ನು ವಾಪಾಸ್​ ನೀಡಿದ್ದಾರೆ. ನಿಜಕ್ಕೂ ಹಣ ಕಂಡರೆ ಹೆಣವೇ ಬಾಯಿ ಬಿಡುವ ಈ ಕಾಲದಲ್ಲಿ ಇಂಥ ಅಪರೂಪದ ವಿರಳ ವ್ಯಕ್ತಿತ್ವದ ಜನರು ಆದರ್ಶವಾಗಿದ್ದಾರೆ.

ಈ ಮೊದಲು ಹೀಗೆ ₹ 3 ಸಾವಿರ ಜಮೆ ಆಗಿತ್ತು. ಆಗಲೂ ವಾಪಾಸ್​ ನೀಡಿದ್ದೇನೆ. ಕೈ ತಪ್ಪಿನಿಂದ ಆದ ಘಟನೆಗಳು ಎಂದು ನಗುತ್ತಲೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಹೇಬ ಪಟೇಲ ಚಾಚಾ.

Last Updated : Jun 16, 2019, 10:31 AM IST

For All Latest Updates

TAGGED:

ABOUT THE AUTHOR

...view details