ಕರ್ನಾಟಕ

karnataka

ETV Bharat / briefs

ಕಾರಾಗೃಹದಲ್ಲಿ ನನ್ನ ಮೇಲೆ ಹಲ್ಲೆಯಾಗಿಲ್ಲ: ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟನೆ - ಮಂಗಳೂರು

ಭಾನುವಾರ ಕಾರಾಗೃಹದೊಳಗೆ ನಡೆದ ಹೊಡೆದಾಟದಲ್ಲಿ ವಿಚಾರಣಾಧೀನ ಕೈದಿ ಮತ್ತೊಂದು ಬ್ಯಾರಕ್​ನ ಕೈದಿಗಳಾದ ಜೈನು ಹಾಗೂ ಅನ್ಸಾರ್ ಎಂಬವರಿಗೆ ತನ್ನ 20 ಮಂದಿ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದ್ದರು. ಈ ವೇಳೆ ಪೊಲೀಸ್​ ಕಮೀಷನರ್ ಮೇಲೆಯೂ ಹಲ್ಲೆ ನಡೆದಿದೆ ಎಂಬ ವದಂತಿಗಳಿಗೆ ಸ್ವತಃ ಪೊಲೀಸ್​ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

mangalore
mangalore

By

Published : Apr 27, 2021, 5:47 PM IST

Updated : Apr 27, 2021, 8:39 PM IST

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ಕೈದಿಗಳ ನಡುವೆ ನಡೆದ ಮಾರಾಮಾರಿಯ ಬಗ್ಗೆ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ತನ್ನ ಮೇಲೆ ಹಲ್ಲೆಯಾಗಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಸ್ಪಷ್ಟನೆ ನೀಡಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತಾಡಿದ ಅವರು, ಕೆಲ ಪತ್ರಿಕೆ ಹಾಗೂ ವೆಬ್​ಸೈಟ್​ನಲ್ಲಿ ಭಾನುವಾರ ಜೈಲಿನೊಳಗೆ ಕೈದಿಗಳ ನಡುವೆ ನಡೆದ ಮಾರಾಮಾರಿಯ ಬಗ್ಗೆ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಜೈಲು ಅಧಿಕಾರಿಗಳು, ಸಿವಿಲ್ ಪೊಲೀಸರು ಹಾಗೂ ಮಂಗಳೂರು ಪೊಲೀಸ್ ಆಯುಕ್ತರ ಮೇಲೂ ಹಲ್ಲೆಯಾಗಿದೆ ಎಂದು ತಪ್ಪಾಗಿ ಬರೆದಿದ್ದಾರೆ. ಆದರೆ ನನ್ನ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸುದ್ದಿ ಮಾಧ್ಯಮದವರು ಸರಿಪಡಿಸಲಿ ಎಂದು ಹೇಳಿದರು.

ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟನೆ

ಭಾನುವಾರ ಕಾರಾಗೃಹದೊಳಗೆ ನಡೆದ ಹೊಡೆದಾಟದಲ್ಲಿ ವಿಚಾರಣಾಧೀನ ಕೈದಿ ಮತ್ತೊಂದು ಬ್ಯಾರಕ್​ನ ಕೈದಿಗಳಾದ ಜೈನು ಹಾಗೂ ಅನ್ಸಾರ್ ಎಂಬವರಿಗೆ ತನ್ನ 20 ಮಂದಿ ಸಹಚರರೊಂದಿಗೆ ಸೇರಿ ಹಲ್ಲೆ ನಡೆಸಿದ್ದ. ಜೈಲು ಅಧಿಕಾರಿಗಳು ಬಿಡಿಸಲು ಹೋದ ಸಂದರ್ಭ ಅವರಿಗೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ ತಾನು ಪರಿಶೀಲನೆಗೆಂದು ತೆರಳಿದ ಸಂದರ್ಭದಲ್ಲಿ ಅವನನ್ನು ಕರೆದುಕೊಂಡು ಬರಲು ಹೋದ ಜೈಲು ಸಿಬ್ಬಂದಿ ಹಾಗೂ ಸ್ಥಳೀಯ ಠಾಣಾ ಸಿವಿಲ್ ಪೊಲೀಸ್ ಸಿಬ್ಬಂದಿ ಮೇಲೂ ದಾಳಿ ನಡೆಸಿರೋದು ಸತ್ಯ. ಆದರೆ ನನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ: ಇಬ್ಬರಿಗೆ ಗಾಯ

Last Updated : Apr 27, 2021, 8:39 PM IST

ABOUT THE AUTHOR

...view details