ಕರ್ನಾಟಕ

karnataka

By

Published : May 15, 2019, 7:01 PM IST

ETV Bharat / briefs

ಐಪಿಎಲ್​ ಟ್ರೋಫಿ ಗೆದ್ದ ಸಂಭ್ರಮ: ಕೃಷ್ಣನ ಪಾದದ ಮುಂದಿಟ್ಟು ಭಜನೆ ಮಾಡಿದ ನೀತಾ ಅಂಬಾನಿ!

ಟ್ರೋಫಿ ಗೆಲ್ಲುತ್ತಿದ್ದಂತೆ ಮುಂಬೈನ ವಿವಿಧ ರೋಡ್​ಗಳಲ್ಲಿ ತಂಡದೊಂದಿಗೆ ಸಂಭ್ರಮಾಚರಣೆ ಮಾಡಿದ್ದ ನೀತಾ ಅಂಬಾನಿ ತಂದನಂತರ ಮನೆಗೆ ತೆರಳಿ ಕೃಷ್ಣನ ಮುಂದಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನೀತಾ ಅಂಬಾನಿ ಸಂಭ್ರಮ

ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್​ ತಂಡ ಟ್ರೋಫಿ ಗೆದ್ದಾಗಿದೆ. ತಂಡದೊಂದಿಗೆ ನೀತಾ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಬಳಿಕ ರಾತ್ರಿ ಮನೆಗೆ ತೆರಳಿ ದೇವರ ಕೋಣೆಯಲ್ಲಿ ಕೃಷ್ಣನ ಮೂರ್ತಿಯ ಮುಂದೆ ಟ್ರೋಫಿಯನ್ನಿಟ್ಟು ಭಜನೆ ಮಾಡಿದ್ದಾರೆ.

ಮುಂಬೈನ ಅಂಟಿಲಿಯಾ’ ನಿವಾಸದಲ್ಲಿರುವ ದೇವರ ಕೋಣೆಗೆ ತೆರಳಿರುವ ನೀತಾ ಅಂಬಾನಿ, ಐಪಿಎಲ್​ ಟ್ರೋಫಿಯನ್ನ ತೆಗೆದುಕೊಂಡು ಹೋಗಿ ಕೃಷ್ಣನ ಮುಂದೆ ಇರಿಸಿ, ಭಜನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ. ತದನಂತರ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕನ ಮಂದಿರಕ್ಕೆ ತೆರಳಿ ಐಪಿಎಲ್ ಟ್ರೋಫಿಗೆ ಪೂಜೆ ಸಲ್ಲಿಸಿದ್ದಾರೆ.

ರೋಚಕ ಹಂತದಿಂದ ಕೂಡಿದ್ದ ಫೈನಲ್​ನಲ್ಲಿ ಮುಂಭೈ ಇಂಡಿಯನ್ಸ್​​ ಕೇವಲ 1ರನ್​ಗಳ ಗೆಲುವು ದಾಖಲು ಮಾಡಿತ್ತು. ಕೊನೆಯ ಓವರ್​​ನಲ್ಲಿ ನೀತಾ ಅಂಬಾನಿ ಪ್ರಾರ್ಥನೆ ಮಾಡುತ್ತಿದ್ದ ದೃಶ್ಯ ಸಹ ಮೇಲಿಂದ ಮೇಲೆ ಕಂಡು ಬಂದಿದ್ದವು.

ABOUT THE AUTHOR

...view details