ಕರ್ನಾಟಕ

karnataka

ETV Bharat / briefs

ಕೊರೊನಾ ನಿಯಮ ಪಾಲಿಸದೆ ನಿಶ್ಚತಾರ್ಥ: ದಾಳಿ ನಡೆಸಿ 15 ಸಾವಿರ ದಂಡ ವಿಧಿಸಿದ ಅಧಿಕಾರಿಗಳು - ನಗರಸಭೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ದಾಳಿ

ಕೊರೊನಾ ನಿಯಮಗಳನ್ನು ಪಾಲಿಸದೇ ಹೆಚ್ಚಿನ ಜನ ಸೇರಿಸಿ ನಿಶ್ಚಿತಾರ್ಥ ನಡೆಸುತ್ತಿದ್ದ ಸಮುದಾಯ ಭವನಕ್ಕೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು 15 ಸಾವಿರ ದಂಡ ವಿಧಿಸಿದ್ದಾರೆ.

Mandya
Mandya

By

Published : Apr 22, 2021, 5:04 PM IST

ಮಂಡ್ಯ:ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಹಿನ್ನೆಲೆಯಲ್ಲಿ ಸಮುದಾಯ ಭವನಕ್ಕೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.

ನಗರದ ಬನ್ನೂರು ರಸ್ತೆಯಲ್ಲಿರುವ ಯೋಗಿ ನಾರಾಯಣ ಸಮುದಾಯ ಭವನದಲ್ಲಿ ನಿಶ್ಚಿತಾರ್ಥದಲ್ಲಿ ಜನ ಜಂಗುಳಿ ಸೇರಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ 15 ಸಾವಿರ ರೂ. ದಂಡ ಹಾಕಿದ್ದಾರೆ.

ಹೆಚ್ಚಿನ ಜನ ಸೇರಿಸಿ ನಿಶ್ಚಿತಾರ್ಥ ಮಾಡುತ್ತಿದ್ದ ಸಮುದಾಯ ಭವನಕ್ಕೆ ನಗರಸಭೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ದಾಳಿ ಮಾಡಿ ದಂಡ ವಿಧಿಸಿ, ಮುಂದೆ ಇಂತಹ ಘಟನೆಗಳು ನಡೆಯದಂತೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details