ಕರ್ನಾಟಕ

karnataka

ಮೋದಿ ಕಪಾಳಕ್ಕೆ ಬಾರಿಸಲು ಬಯಸುತ್ತೇನೆ... ಪಿಎಂ ವಿರುದ್ಧ ದೀದಿ ವಾಗ್ದಾಳಿ

By

Published : May 7, 2019, 9:30 PM IST

ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು, 'ಪಶ್ಚಿಮ ಬಂಗಾಳದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದವರನ್ನು ಬಂಧಿಸುವ ಮಮತಾ ಬ್ಯಾನರ್ಜಿ ಸರಕಾರ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ, ನಾನೂ ಜೈ ಶ್ರೀರಾಮ್ ಅನ್ನುತ್ತೇನೆ' ಎಂದು ಸವಾಲು ಹಾಕಿದ್ದರು.

ದೀದಿ

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ಕಪಾಳಕ್ಕೆ ಬಾರಿಸಲು ಬಯಸುತ್ತೇನೆ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಸಾರ್ವಜನಿಕ ರಾಲಿಯೊಂದರಲ್ಲಿ ಮಾತನಾಡಿದ ದೀದಿ, ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಮೋದಿ ಅವರು ಬಂಗಾಳಕ್ಕೆ ಬಂದು ನನ್ನನ್ನು ದೊಡ್ಡ ಸುಲಿಗೆಕೋರಳು ಎಂದು ಹೇಳುತ್ತಾರೆ. ಅವರ ಕಪಾಳಕ್ಕೆ ಹೊಡೆಯಲು ನಾನು ಬಯಸುತ್ತೇನೆ. ಪ್ರಜಾಪ್ರಭುತ್ವದ ಕಪಾಳಮೋಕ್ಷ ಅವರಿಗೆ ಅಗತ್ಯವಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮೋದಿ ಅವರನ್ನು ದುರ್ಯೋಧನ, ರಾವಣನಿಗೆ ಹೋಲಿಸಿದರು.

ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು, 'ಪಶ್ಚಿಮ ಬಂಗಾಳದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದವರನ್ನು ಬಂಧಿಸುವ ಮಮತಾ ಬ್ಯಾನರ್ಜಿ ಸರಕಾರ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ, ನಾನೂ ಜೈ ಶ್ರೀರಾಮ್ ಅನ್ನುತ್ತೇನೆ' ಎಂದು ಸವಾಲು ಹಾಕಿದ್ದರು.

ಮಮತಾ ಬ್ಯಾನರ್ಜಿ ಅವರು ರೋಡ್ ಶೋ ನಡೆಸುತ್ತಿದ್ದಾಗ ಮೂವರು ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಅವರನ್ನು ಕೂಡಲೇ ಬಂಧಿಸುವಂತೆ ದೀದಿ ಸರಕಾರ ಆದೇಶಿಸಿರುವ ಘಟನೆಯ ವೀಡಿಯೋ ಶನಿವಾರ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೀದಿಗೆ ಸವಾಲೆಸೆದಿದ್ದರು.

ABOUT THE AUTHOR

...view details