ಕರ್ನಾಟಕ

karnataka

ETV Bharat / briefs

ಬಣ್ಣ ಹಚ್ಚಿ ರಂಗಪ್ರವೇಶಿಸಿದ್ರು ಶಾಸಕ... ಕೃಷ್ಣನ ನಟನೆಗೆ ಬಂಗಾರಪೇಟೆ ಜನ ಫಿದಾ! - undefined

ಪ್ರತಿನಿತ್ಯ ರಾಜಕೀಯ ಅನ್ನೋ‌ ಚದುರಂಗದಾಟದಲ್ಲಿ ಬಣ್ಣ ಹಚ್ಚದೆ ಒಂದಲ್ಲಾ‌ ಒಂದು ನಾಟಕ ಮಾಡುವ ಜನಪ್ರತಿನಿಧಿಗಳು, ಜನರನ್ನು ರಂಜಿಸಲು ಬಣ್ಣ ಹಚ್ಚಿ ರಂಗ ಪ್ರವೇಶಿಸಿದ್ರೆ ಹೇಗಿರುತ್ತೆ. ಇಂತಹ ಒಂದು ಸನ್ನಿವೇಶ ಕೋಲಾರದ ಬಂಗಾರಪೇಟೆಯಲ್ಲಿ ಸೃಷ್ಟಿಯಾಗಿತ್ತು. ಶಾಸಕ ಎಸ್. ಎನ್. ನಾರಾಯಣಸ್ವಾಮಿ ‌ಸೇರಿದಂತೆ ಇತರ ಜನಪ್ರತಿನಿಧಿಗಳು ಬಣ್ಣ ಹಚ್ಚಿ ನಾಟಕದ ಪಾತ್ರಗಳಿಗೆ ಜೀವ ತುಂಬಿದ್ರು.

ಬಣ್ಣ ಹಚ್ಚಿ ರಂಗಪ್ರವೇಶಿಸಿದ್ರು ಎಸ್. ಎನ್. ನಾರಾಯಣಸ್ವಾಮಿ

By

Published : Apr 28, 2019, 4:31 PM IST

ಕೋಲಾರ :ಜಿಲ್ಲೆಯ ಬಂಗಾರಪೇಟೆ ತಾಲೂಕು ಬೂದಿಕೋಟೆ ಗ್ರಾಮದ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಜಾತ್ರಾ‌‌ ಮಹೋತ್ಸವ ನಡೆಯಿತು. ಇದರ ಅಂಗವಾಗಿ ನಡೆದ ಸಾಮ್ರಾಟ್ ಸುಯೋಧನ ಅನ್ನೋ‌ ತೆಲುಗು ಪೌರಾಣಿಕ ನಾಟಕದಲ್ಲಿ ಜನಪ್ರತಿನಿಧಿಗಳು ಬಣ್ಣಹಚ್ಚಿದ್ದು ವಿಶೇಷವಾಗಿತ್ತು.

ಬಂಗಾರಪೇಟೆ ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಎನ್. ನಾರಾಯಣಸ್ವಾಮಿ ‌ಸೇರಿದಂತೆ, ಸ್ಥಳೀಯ ಜಿಲ್ಲಾ ಪಂಚಾಯತ್​ ಸದಸ್ಯರು, ತಾಲೂಕು ಪಂಚಾಯತ್​ ಸದಸ್ಯರು ಹಾಗೂ‌ ಗ್ರಾಮ ಪಂಚಾಯತ್​ ಸದಸ್ಯರು ಪಕ್ಷಾತೀತವಾಗಿ ಒಂದೆಡೆ ಸೇರಿ‌ ನಾಟಕ ಅಭ್ಯಾಸ ಮಾಡಿದರು. ಅದೆಲ್ಲದರ ಪರಿಣಾಮ ಶಾಸಕ ನಾರಾಯಣಸ್ವಾಮಿ ಶ್ರೀಕೃಷ್ಣನ‌ ಪಾತ್ರಧಾರಿಯಾಗಿ ಹಾಗೂ ಇತರ ಜನಪ್ರತಿನಿಧಿಗಳು ವಿವಿಧ ವೇಷಗಳಲ್ಲಿ ಮಿಂಚಿದ್ರು.

ಬಣ್ಣ ಹಚ್ಚಿ ರಂಗಪ್ರವೇಶಿಸಿದ್ರು ಶಾಸಕ ಎಸ್. ಎನ್. ನಾರಾಯಣಸ್ವಾಮಿ

ಇದೇ ವೇಳೆ ಮಾತನಾಡಿದ ಶಾಸಕರು, ಇದೊಂದು ಹೊಸ‌ ಅನುಭವ. ಜೊತೆಗೆ ಸದಾ ಅಧಿಕಾರ, ರಾಜಕೀಯ ಜಂಜಾಟದಲ್ಲಿರುವ ನಮಗೆ ಒಳ್ಳೆಯ ಮನರಂಜನೆ ನೀಡಿದೆ ಅಂದ್ರು.

ಸದಾ ರಾಜಕೀಯ ವೇದಿಕೆಗಳಲ್ಲಿ ಕಾಣಿಸಕೊಳ್ಳುವ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು, ಜನರಿಗಾಗಿ ಮನರಂಜನೆ ನೀಡಲು‌ ಬಣ್ಣ ಹಚ್ಚಿ, ಪೌರಾಣಿಕ ನಾಟಕದ ಪಾತ್ರ ಮಾಡಲು ಮುಂದಾಗಿದ್ದನ್ನ ಮೆಚ್ಚಲೇಬೇಕು. ಶಾಸಕರ ಬೆಂಬಲಿಗರಿಗೆ ಹಾಗೂ ಕ್ಷೇತ್ರದ ಜನರಿಗೆ ಇವರೆಲ್ಲಾ ಮತ್ತಷ್ಟು ಹತ್ತಿರವಾಗುವ ಜೊತೆಗೆ ರಾಜಕೀಯ ‌ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಜನರ‌‌‌‌ ಮನಸ್ಸು ಗೆಲ್ಲಲು ‌ಪ್ರಯತ್ನಿಸಿದ್ರು.

For All Latest Updates

TAGGED:

ABOUT THE AUTHOR

...view details