ಕರ್ನಾಟಕ

karnataka

By

Published : Apr 22, 2021, 6:11 PM IST

ETV Bharat / briefs

ಜಿಂದಾಲ್​ನಿಂದ ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕೊಡಲು ಸಾಧ್ಯವಿಲ್ಲ: ಶಶಿಕಲಾ ಜೊಲ್ಲೆ

ಜಿಂದಾಲ್‌ನಿಂದ ಶೇ. 50ರಷ್ಟು ಆಕ್ಸಿಜನ್ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡೊ ಪ್ರಶ್ನೆಯೇ ಇಲ್ಲ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Minister Shashikala jolle
Minister Shashikala jolle

ವಿಜಯಪುರ:ಜಿಂದಾಲ್‌ನಿಂದ ಶೇ. 50ರಷ್ಟು ಆಕ್ಸಿಜನ್ ಮಹಾರಾಷ್ಟ್ರಕ್ಕೆ ನೀಡುವ ವಿಚಾರವಾಗಿ ವಿಜಯಪುರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.

ಆಕ್ಸಿಜನ್ ಬಿಟ್ಟು ಕೊಡೊ ಪ್ರಶ್ನೆಯೇ ಇಲ್ಲ. ಕಳೆದ ಬಾರಿ ಮಹಾರಾಷ್ಟ್ರದವರು ನಮಗೆ ಕೊಟ್ಟಿರಬಹುದು. ಅದು ಮಾನವೀಯತೆ ದೃಷ್ಟಿಯಿಂದ ಕೊಟ್ಟಿರಬಹುದು ಎಂದರು.

ಇವತ್ತು ಕೊಡೊ ಪರಿಸ್ಥಿತಿಯಲ್ಲಿ ನಾವಿಲ್ಲ. ಅವಶ್ಯಕತೆಗಿಂತ ಹೆಚ್ಚಿಗೆ ಆಕ್ಸಿಜನ್ ಸಂಗ್ರಹ ಇಟ್ಟುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಜಯಪುರದಲ್ಲೂ ಹೆಚ್ಚಿಗೆ ಸ್ಟಾಕ್ ಮಾಡಿ ಇಟ್ಟುಕೊಳ್ಳಲು ಹೇಳಿದ್ದೀನಿ. ಜಿಂದಾಲ್​ನವರಿಗೆ ಡಿಸಿ ಮಾತಾಡಿದ್ದಾರೆ, ಲೆಟರ್ ಕೂಡ ನಾವು ಕೊಡ್ತಾ ಇದ್ದೇವೆ. ಮೊದಲು ನಮಗೆ ಸಪ್ಲೈ ಮಾಡಿ, ಜಾಸ್ತಿಯಾದರೆ ಆ ರಾಜ್ಯಕ್ಕೆ ಕೊಡಬಹುದು ಎಂದರು.

ABOUT THE AUTHOR

...view details