ಬಂಟ್ವಾಳ: ಕಳೆದ ವರ್ಷ ನೀರಿಲ್ಲದೆ ಸೊರಗಿದ್ದ ತುಂಬೆ ಡ್ಯಾಂ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಭರ್ತಿಯಾಗಿದೆ.
ಮಳೆಗಾಲಕ್ಕೂ ಮೊದಲೇ ತುಂಬಿದ ತುಂಬೆ ಆಣೆಕಟ್ಟು : ಮಂಗಳೂರಿಗರಿಗೆ ನೀರಿಗೆ ಬರವಿಲ್ಲ! - Mangalore rain news
ಬಂಟ್ವಾಳದ ತುಂಬೆಯಲ್ಲಿ ಕಟ್ಟಿದ ಅಣೆಕಟ್ಟು ಭರ್ತಿಯಾಗಿದ್ದು, ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿದ್ದ ಮಂಗಳೂರಿಗೆ ನೀರಿನ ಕೊರತೆ ಈ ಬಾರಿ ಇಲ್ಲದಂತಾಗಿದೆ.
Tumbe water reservoir
ಮಳೆಯ ಮುನ್ನೆಚ್ಚರಿಕೆಯಾಗಿ ಡ್ಯಾಂನಲ್ಲಿ ಅರ್ಧ ಮೀಟರ್ನಷ್ಟು ನೀರನ್ನು ಕಡಿಮೆ ನಿಲ್ಲಿಸಲಾಗಿದೆ. ತುಂಬೆ ಡ್ಯಾಂನಲ್ಲಿ 5.5 ಮೀ. ನೀರಿದ್ದು, ಇನ್ನು ಸುಮಾರು ಒಂದೂವರೆ ತಿಂಗಳು ಮಳೆ ವಿಳಂಬವಾದರೂ ಮಂಗಳೂರಿನ ಜನತೆ ಆತಂಕ ಪಡಬೇಕಿಲ್ಲ. ಜತೆಗೆ ಶಂಭೂರು ಡ್ಯಾಂನಲ್ಲಿಯೂ 18.9 ಮೀ. ಭರ್ತಿ ನೀರಿದೆ.