ಭೋಪಾಲ್:ಮಾಲೆಗಾಂವ್ ಸ್ಫೋಟ ಪ್ರಕರಣ ಸಂಬಂಧ ಜೈಲು ಸೇರಿದ್ದ ಸಾಧ್ವಿ ಪ್ರಗ್ಯ ಸಿಂಗ್ ಅವರು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಂತೆ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.
ಉಗ್ರಗಾಮಿ ಕಳಂಕ: ದಿಗ್ವಿಜಯ್ ವಿರುದ್ಧ ಸಾಧ್ವಿ ಸ್ಪರ್ಧೆ ತಡೆ ಕೋರಿ ಕೋರ್ಟ್ ಮೊರೆ - ಸಾಧ್ವಿ ಪ್ರಗ್ಯ ಸಿಂಗ್
ಭೋಪಾಲ್ನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಅವರಿಗೆ ಉಗ್ರ ಕಳಂಕ ಇರುವ ಕಾರಣ ಅವರಿಗೆ ಅವಕಾಶ ನೀಡಕೂಡದು ಎಂದು ಮಾಲೆಗಾಂವ್ ಸ್ಫೋಟದಲ್ಲಿ ಮಗನನ್ನುಕಳೆದುಕೊಂಡ ತೆಹ್ಸೀನ್ ಪೂಂಚ್ವಾಲಾ ಅವರು ಎನ್ಐಎ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
![ಉಗ್ರಗಾಮಿ ಕಳಂಕ: ದಿಗ್ವಿಜಯ್ ವಿರುದ್ಧ ಸಾಧ್ವಿ ಸ್ಪರ್ಧೆ ತಡೆ ಕೋರಿ ಕೋರ್ಟ್ ಮೊರೆ](https://etvbharatimages.akamaized.net/etvbharat/images/768-512-3041526-thumbnail-3x2-sd.jpg)
ಭೋಪಾಲ್ನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಅವರಿಗೆ ಉಗ್ರ ಕಳಂಕ ಇರುವ ಕಾರಣ ಅವರಿಗೆ ಅವಕಾಶ ನೀಡಕೂಡದು ಎಂದು ಮಾಲೆಗಾಂವ್ ಸ್ಫೋಟದಲ್ಲಿ ಮಗನನ್ನುಕಳೆದುಕೊಂಡ ತೆಹ್ಸೀನ್ ಪೂಂಚ್ವಾಲಾ ಅವರು ಎನ್ಐಎ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅನಾರೋಗ್ಯದ ನೆಪ ಹೇಳಿ ಜಾಮೀನಿನ ಮೇಲೆ ಹೊರಬಂದಿರುವ ಸಾಧ್ವಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಹೇಗೆ ಅವಕಾಶ ಸಿಕ್ಕಿದೆ? ಈ ಬೇಸಿಗೆಯ ಶೆಕೆಯಲ್ಲಿ ಅವರು ಓಡಾಡುತ್ತಿದ್ದಾರೆಂದರೆ ಅವರ ಆರೋಗ್ಯ ಸರಿಯಾಗಿಯೇ ಇದೆ. ಸಾಧ್ವಿ ಅವರು ಕೋರ್ಟ್ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.