ಕರ್ನಾಟಕ

karnataka

ETV Bharat / briefs

ಬಿಜೆಪಿಯ ರಾಥೋಡ್​​​, ಕ್ರಿಕೆಟಿಗ ಗಂಭೀರ್​ಗೆ ಭರ್ಜರಿ ಜಯ... ವಿಜೇಂದರ್​ಗೆ ಹೀನಾಯ ಸೋಲು - ವಿಜೇಂದರ್​ ಸಿಂಗ್​

ಗೌತಮ್​ ಗಂಭೀರ್​ ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಜಯ ಸಾಧಿಸಿದರೆ, ಬಾಕ್ಸಿಂಗ್​ನಲ್ಲಿ ಒಲಿಂಪಿಕ್​ ಪದಕ ತಂದುಕೊಟ್ಟಿದ್ದ ವಿಜೇಂದರ್​ ಸಿಂಗ್​ ಹೀನಾಯ ಸೋಲು ಕಂಡು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

gm

By

Published : May 23, 2019, 6:12 PM IST

ನವದೆಹಲಿ/ಜೈಪುರ: ಭಾರತಕ್ಕೆ 2 ವಿಶ್ವಕಪ್​ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ತಮ್ಮ ಮೊದಲ ಚುನಾವಣೆಯಲ್ಲೇ ಭರ್ಜರಿ ಜಯ ಸಾಧಿಸಿದ್ದಾರೆ.

ಪೂರ್ವ ದೆಹಲಿಯಿಂದ ಸ್ಪರ್ಧಿಸಿದ್ದ ಗಂಭೀರ್​ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್​ನ ಅರ್ವಿಂದರ್​ ಸಿಂಗ್​ ಹಾಗೂ ಎಎಪಿಯ ಅತಿಶಿ ವಿರುದ್ಧ 2,38 ಲಕ್ಷ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ರಾಜ್ಯವರ್ಧನ್​ ಸಿಂಗ್​ ರಾಥೋಡ್​ಗೆ ಜಯ:

ಜೈಪುರ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಿ ಕ್ರೀಡಾ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​​​ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ರಾಷ್ಟ್ರೀಯ ಡಿಸ್ಕಸ್​ ಥ್ರೋನಲ್ಲಿ ಮೂರು ಬಾರಿ ಒಲಿಂಪಿಕ್​ನಲ್ಲಿ ಸ್ಪರ್ಧಿಸಿದ್ದ ಕೃಷ್ಣ ಪೂನಿಯಾ ವಿರುದ್ಧ 1.3 ಲಕ್ಷಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯ ಸಾಧಿಸುವ ಮೂಲ ಸತತ ಎರಡನೇ ಬಾರಿ ಸಂಸತ್​ ಪ್ರವೇಶಿಸಿದ್ದಾರೆ.

ವಿಜೇಂದರ್​ ಸಿಂಗ್​ಗೆ ಸೋಲು:

ಕಾಂಗ್ರೆಸ್​ನಿಂದ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ್ದ ಬಾಕ್ಸರ್​ ವಿಜೇಂದರ್​ ಸಿಂಗ್​ ಮೂರನೇ ಸ್ಥಾನ ಪಡೆದು ತಮ್ಮ ತಾಕತ್ತು ರಿಂಗ್​ನಲ್ಲಿ ಮಾತ್ರ ರಾಜಕೀಯದಲ್ಲಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ.

ದಕ್ಷಿಣ ದೆಹಲಿಯಲ್ಲಿ ಬಿಜೆಪಿಯ ರಮೇಶ್​ ಬಾದುರಿ 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಎಎಪಿಯ ರಾಘವ್​ ಚಂದ ವಿರುದ್ಧ ಜಯ ಸಾಧಿಸಿದ್ದಾರೆ.

ABOUT THE AUTHOR

...view details