ಕರ್ನಾಟಕ

karnataka

ETV Bharat / briefs

ಲಿಬಿಯಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ... ತಕ್ಷಣವೇ ಟ್ರಿಪೋಲಿ ತೊರೆಯಲು ಭಾರತೀಯರಿಗೆ ಸುಷ್ಮಾ ಮನವಿ - ಟ್ವೀಟ್

ಲಿಬಿಯಾದಿಂದ ಈಗಾಗಲೇ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದ್ದರೂ ರಾಜಧಾನಿ ಟ್ರಿಪೋಲಿಯಲ್ಲಿ ಇನ್ನೂ 500ಕ್ಕೂ ಅಧಿಕ ಭಾರತೀಯರು ವಾಸವಾಗಿದ್ದಾರೆ.

ಸುಷ್ಮಾ

By

Published : Apr 19, 2019, 9:46 PM IST

ನವದೆಹಲಿ: ಲಿಬಿಯಾ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ರಾಜಧಾನಿ ಟ್ರಿಪೋಲಿಯನ್ನು ತಕ್ಷಣವೇ ತೊರೆಯುವಂತೆ ಭಾರತೀಯ ನಿವಾಸಿಗಳಿಗೆ ಸುಷ್ಮಾ ಸ್ವರಾಜ್​ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ತಕ್ಷಣವೇ ಎಲ್ಲ ಭಾರತೀಯರು ಟ್ರಿಪೋಲಿಯನ್ನು ತೊರೆಯಿರಿ. ನಂತರದಲ್ಲಿ ನಿಮ್ಮನ್ನು ಸ್ಥಳಾಂತರ ಮಾಡುವುದು ಅಸಾಧ್ಯ ಎಂದು ಭಾರತೀಯ ವಿದೇಶಾಂಗ ಸಚಿವೆ ಟ್ವೀಟ್​​ ಮಾಡಿದ್ದಾರೆ.

ಲಿಬಿಯಾದಿಂದ ಈಗಾಗಲೇ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದ್ದರೂ ರಾಜಧಾನಿ ಟ್ರಿಪೋಲಿಯಲ್ಲಿ ಇನ್ನೂ 500ಕ್ಕೂ ಅಧಿಕ ಭಾರತೀಯರು ವಾಸವಾಗಿದ್ದಾರೆ.

ಏನಿದು ಗಲಭೆ...?

ಲಿಬಿಯಾದ ರಾಜಧಾನಿ ಟ್ರಿಪೋಲಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಲಿಬಿಯನ್​​ ನ್ಯಾಷನಲ್​ ಆರ್ಮಿಯ ನಾಯಕ ಖಲಿಫಾ ಹಫ್ತಾರ್​​​ ಪಣತೊಟ್ಟಿದ್ದು ಈ ವೇಳೆ ನಡೆದ ಗಲಭೆಯಲ್ಲಿಎರಡು ವಾರದಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಟ್ರಿಪೋಲಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಹಿಂಸಾಮಾರ್ಗವನ್ನು ಅನುಸರಿಸಿರುವ ಹಫ್ತಾರ್​​, ಬಾಂಬ್ ಹಾಗೂ ಶೆಲ್​​​​​​ ದಾಳಿಯನ್ನೂ ನಡೆಸುತ್ತಿದ್ದಾರೆ.

ABOUT THE AUTHOR

...view details