ಕರ್ನಾಟಕ

karnataka

ETV Bharat / briefs

ಕುಮಾರ ಪರ್ವತದಲ್ಲಿ ಗಾಯಗೊಂಡ ಕಾಡಾನೆ ಪತ್ತೆ -

ಸುಬ್ರಹ್ಮಣ್ಯದ ಕುಮಾರ ಪರ್ವತದ ತಪ್ಪಲಿನ ಬಾಳುಗೋಡು ಮೀಸಲು ಅರಣ್ಯಕ್ಕೆ ಸೇರಿದ ಕೋಟಿ ಝರಿ ಎಂಬಲ್ಲಿ ಗಾಯಗೊಂಡ ಕಾಡಾನೆಯೊಂದು ಪತ್ತೆಯಾಗಿದೆ.

ಗಾಯಗೊಂಡ ಕಾಡಾನೆ

By

Published : May 8, 2019, 8:58 PM IST

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರ ಪರ್ವತದ ತಪ್ಪಲಿನ ಬಾಳುಗೋಡು ಮೀಸಲು ಅರಣ್ಯಕ್ಕೆ ಸೇರಿದ ಕೋಟಿ ಝರಿ ಎಂಬಲ್ಲಿ ಗಾಯಗೊಂಡ ಕಾಡಾನೆ ಪತ್ತೆಯಾಗಿದೆ.

ಈ ಕಾಡಾನೆ ಮುಂಗಾಲು ಊರಲೂ ಆಗದೇ ಯಾತನೆ ಅನುಭವಿಸುತ್ತಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಾಳುಗೋಡು, ಪದಕ, ಮಿತ್ತಡ್ಕ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಈ ಕಾಡಾನೆ ತಿರುಗಾಡುತ್ತಿದೆ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಆನೆ ಇರುವ ಸ್ಥಳಕ್ಕೆ ಆಗಮಿಸಿದ ಅರಣ್ಯಾ‍ಧಿಕಾರಿಗಳು ಪರಿಶೀಲನೆ ನಡೆಸಿದರು. ಗುರುವಾರ ನಾಗರಹೊಳೆಯಿಂದ ತಜ್ಞ ವೈದ್ಯರು ಆಗಮಿಸಿ ಗಾಯಗೊಂಡಿರುವ ಈ ಕಾಡಾನೆಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details