ಕರ್ನಾಟಕ

karnataka

ETV Bharat / briefs

ಎಸಿಬಿ ಬಲೆಗೆ ಖಾದಿ - ಗ್ರಾಮೋದ್ಯೋಗ ಮಂಡಳಿ ಪ್ರಭಾರ ಉಪನಿರ್ದೇಶಕ - undefined

ರಾಮನಗರ ಜಿಲ್ಲಾ ಕೇಂದ್ರದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ ಅಡಿ ಸಾಲ ನೀಡಲು ಲಂಚಕ್ಕೆ ಬೇಡಿಕೆಯಿಟ್ಟು 5 ಸಾವಿರ ಲಂಚ ಪಡೆಯುವ ವೇಳೆ, ಖಾದಿ - ಗ್ರಾಮೋದ್ಯೋಗ ಮಂಡಳಿ ಪ್ರಭಾರ ಉಪನಿರ್ದೇಶಕ ಕಚೇರಿಯಲ್ಲಿಯೇ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿರುವುದು

By

Published : May 28, 2019, 10:25 PM IST

ರಾಮನಗರ : ಲೋನ್‌ ನೀಡುವ ಉದ್ದೇಶಕ್ಕಾಗಿ ಫಲಾನುಭವಿಗಳಿಂದ‌ 5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಪ್ರಭಾರ ಉಪನಿರ್ದೇಶಕ ಗುರುಸಿದ್ದಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.

ರಾಮನಗರ ಜಿಲ್ಲಾ ಕೇಂದ್ರದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ ಅಡಿ ಸಾಲ ನೀಡಲು ಲಂಚಕ್ಕೆ ಬೇಡಿಕೆಯಿಟ್ಟು 5 ಸಾವಿರ ಲಂಚ ಪಡೆಯುವ ವೇಳೆ ಕಚೇರಿಯಲ್ಲಿಯೇ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚನ್ನಪಟ್ಟಣದ ಶಾಂತಕುಮಾರ್ ಎಂಬುವವರಿಗೆ 10 ಲಕ್ಷ ಲೋನ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗುರುಸಿದ್ದಪ್ಪ ಕಂತಿನ‌ ರೂಪದಲ್ಲಿ ಹಣ ಪಡೆಯುತ್ತಿದ್ದರು. ಈ ವೇಳೆ ಶಾಂತಕುಮಾರ್, ನೀಡಿದ ಮಾಹಿತಿ‌ ಮತ್ತು ದೂರಿನನ್ವಯ ಎಸಿಬಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಎಸಿಬಿ ಬಲೆಗೆ ಬಿದ್ದ ಅಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

For All Latest Updates

TAGGED:

ABOUT THE AUTHOR

...view details