ಕರ್ನಾಟಕ

karnataka

ETV Bharat / briefs

ಕೆ-ಸೆಟ್ ಪರೀಕ್ಷೆ: ರಾಜ್ಯಕ್ಕೆ 7ನೇ ಸ್ಥಾನ ಪಡೆದ ಬಳ್ಳಾರಿಯ ವಿದ್ಯಾರ್ಥಿ - undefined

ಕೆ-ಸೆಟ್ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಸಿ.ಎಸ್.ವಿಷ್ಣುಸಾಯಿ ಎಂಬ ವಿದ್ಯಾರ್ಥಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾರೆ.

ಸಿ.ಎಸ್.ವಿಷ್ಣುಸಾಯಿ

By

Published : May 25, 2019, 11:13 PM IST

ಬಳ್ಳಾರಿ: ಜಿಲ್ಲೆಯ ನಾರಾಯಣ ಇ-ಟೆಕ್ನೋ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಿ.ಎಸ್.ವಿಷ್ಣುಸಾಯಿ ಕೆ-ಸೆಟ್ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾರೆ. ಸಿ.ಎಸ್.ವಿಷ್ಣುಸಾಯಿ ಅವರಿಗೆ ಕಾಲೇಜಿನ ಪ್ರಾಚಾರ್ಯ ರಮೇಶ ರೆಡ್ಡಿ ಹಾಗೂ ಸಿಬ್ಬಂದಿ ಸಿಹಿ ತಿನ್ನಿಸುವ ಮೂಲಕ ವಿದ್ಯಾರ್ಥಿಯನ್ನು ಅಭಿನಂದಿಸಿದರು.

ಈ ಟಿವಿ ಭಾರತ್ ಜೊತೆ ತಮ್ಮ ಸಾಧನೆಯ ಕುರಿತು ಮಾತನಾಡಿದ ಸಿ.ಎಸ್.ವಿಷ್ಣುಸಾಯಿ, ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೆ ನಾನು ಓದುತ್ತಲೇ ಇರುತ್ತಿದ್ದೆ. ಉಪನ್ಯಾಸಕರು ಹಾಗೂ ಪ್ರಾಚಾರ್ಯರು ಉತ್ತಮ‌ ಸಹಕಾರ ನೀಡಿದ್ದರು. ಅವರೆಲ್ಲರ ಸಹಕಾರದೊಂದಿಗೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

7 ನೇ ಸ್ಥಾನ ಪಡೆದ ಬಳ್ಳಾರಿಯ ವಿದ್ಯಾರ್ಥಿ

ಎನ್​ಐಟಿ ಮತ್ತು ಐಐಟಿಯಲ್ಲಿ ಟಾಪ್ 5 ಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಳ್ಳಬೇಕೆಂಬ ಗುರಿಯನ್ನು ಹೊಂದಿರುವೆ. ಹೀಗಾಗಿ, ಅದಕ್ಕೆ ಪೂರ್ವ ತಯಾರಿ ನಡೆಸಿಕೊಂಡಿರುವೆ. ಮೇ 27 ರಂದು ಬೆಂಗಳೂರಿನಲ್ಲಿ ಪರೀಕ್ಷೆ ಇದೆ. ಇಡೀ ದೇಶದಲ್ಲಿ ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಮಾತ್ರ ಎನ್​ಐಟಿ ಮತ್ತು ಐಐಟಿಯ ಕುರಿತು ಕೋಚಿಂಗ್ ಸೆಂಟರ್​ಗಳಿವೆ. ಹೇಗಾದರೂ ಮಾಡಿ ಆ ಕೋಚಿಂಗ್ ಸೆಂಟರ್ ನಲ್ಲಿ ಸೀಟ್ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲ ನನಗಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details