ಕರ್ನಾಟಕ

karnataka

ETV Bharat / briefs

ಬಿಜೆಪಿಯ ಎಂಎಲ್​ಸಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಐಟಿ - undefined

ಕಳೆದ ವರ್ಷ ಐಟಿ‌ ಅಧಿಕಾರಿಗಳು ಬಿಜೆಪಿ ಪರಿಷತ್ ಸದಸ್ಯ ಯು ಡಿ ಮಲ್ಲಿಕಾರ್ಜುನ ಮೇಲೆ ದಾಳಿ ‌ನಡೆಸಿದ್ದರು. 10 ಕೋಟಿ ಹಣಕ್ಕೆ ದಂಡ ಕಟ್ಟದೆ ಇರುವ ಪರಿಷತ್ ಸದಸ್ಯನಿಂದ‌ ದಂಡ ವಸೂಲಿ ಮಾಡುವ ಸಲುವಾಗಿ ಐಟಿ ಅಧಿಕಾರಿಗಳು ಕೋರ್ಟ್​ ಮೊರೆ ಹೋಗಿದ್ದಾರೆ.

ಆರ್ಥಿಕ ಅಪರಾಧಗಳ ಕೋರ್ಟ್‌

By

Published : Apr 29, 2019, 5:20 PM IST

ಬೆಂಗಳೂರು : ಬಿಜೆಪಿ ಪರಿಷತ್ ಸದಸ್ಯನಿಗೆ ಐಟಿ ಶಾಕ್ ನೀಡಿದೆ. ಕಳೆದ ವರ್ಷ ಐಟಿ‌ ಅಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಯು. ಡಿ ಮಲ್ಲಿಕಾರ್ಜುನ ಅವರ ಮೇಲೆ ದಾಳಿ ‌ನಡೆಸಿದ್ದರು. ಈ ವೇಳೆ ಪತ್ತೆಯಾಗಿದ್ದ ಅಕ್ರಮ ಆಸ್ತಿ 10 ಕೋಟಿ ರೂ. ಗೆ ಫೈನ್ ಕಟ್ಟುವಂತೆ ಸೂಚಿಸಿದ್ದರು.

ಈ ವಿಚಾರವಾಗಿಯೇ 4 ಬಾರಿ ನೋಟಿಸ್ ನೀಡಿದ್ದರು. ಆದರೆ ಮಲ್ಲಿಕಾರ್ಜುನ ಮಾತ್ರ ಕ್ಯಾರೆ ಅಂದಿರಲಿಲ್ಲ. ಹೀಗಾಗಿ 10 ಕೋಟಿ ಹಣಕ್ಕೆ ದಂಡ ಕಟ್ಟದೆ ಇದ್ದ ಬಿಜೆಪಿ ಪರಿಷತ್ ಸದಸ್ಯನಿಂದ‌ ದಂಡ ವಸೂಲಿ ಮಾಡುವ ಸಲುವಾಗಿ ಐಟಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರ್ಥಿಕ ಅಪರಾಧಗಳ ಕೋರ್ಟ್‌ಗೆ ಈ ಕುರಿತು ದೂರು ಸಲ್ಲಿಸಿ‌‌ದ್ದಾರೆ.

For All Latest Updates

TAGGED:

ABOUT THE AUTHOR

...view details