ಕರ್ನಾಟಕ

karnataka

ETV Bharat / briefs

ಕುಕ್ಕೆ ಸುಬ್ರಹ್ಮಣ್ಯಕ್ಕೆ ಈಶ್ವರ್​​ ಖಂಡ್ರೆ ಭೇಟಿ: ದೇವರ ದರ್ಶನ, ವಿಶೇಷ ಪೂಜೆ - kukke subramanya temple

ಕೊರೊನಾ ಮಹಾ ಕಂಟಕದಿಂದ ಸರ್ವರನ್ನು ಪಾರು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪರಿವಾರ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

kukke subramanya temple
kukke subramanya temple

By

Published : Jun 16, 2020, 6:07 PM IST

ಸುಬ್ರಹ್ಮಣ್ಯ:ಕರ್ನಾಟಕ ಕಾಂಗ್ರೆಸ್‌ ರಾಜ್ಯ ಕಾರ್ಯಾಧ್ಯಕ್ಷ, ಶಾಸಕ ಈಶ್ವರ್ ಖಂಡ್ರೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮರ್ದಾಳ ಜಂಕ್ಷನ್ ಬಳಿ ಈಶ್ವರ್​​ ಖಂಡ್ರೆಯವರನ್ನು ಕಡಬ ಯುವಕ ಕಾಂಗ್ರೆಸ್ ವತಿಯಿಂದ ಸ್ವಾಗತಿಸಿ, ಅಭಿನಂದಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ ಈಶ್ವರ್​ ಖಂಡ್ರೆ, ಕೊರೊನಾ ನಿಮಿತ್ತ ಸಂಕಷ್ಟದಲ್ಲಿರುವ ಜಗತ್ತು ಆದಷ್ಟು ಶೀಘ್ರವಾಗಿ ಕಂಟಕ ಮುಕ್ತವಾಗಲಿ. ರಾಜ್ಯ ಹಾಗೂ ದೇಶದ ಜನರ ಸಂಕಷ್ಟ ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಕುಟುಂಬ ಸಮೇತರಾಗಿ ಪ್ರಾರ್ಥಿಸಲು ಬಂದಿದ್ದಾಗಿ ತಿಳಿಸಿದರು.

ABOUT THE AUTHOR

...view details