ಕರ್ನಾಟಕ

karnataka

By

Published : Mar 20, 2019, 7:32 AM IST

ETV Bharat / briefs

4ನೇ ಕ್ರಮಾಂಕಕ್ಕೆ​ ಐಪಿಎಲ್​ ಪ್ರದರ್ಶನವೇ ನಿರ್ಣಾಯಕ ಎಂದ ಬಿಸಿಸಿಐ... ಯಾರಿಗೆ ಸಿಗಲಿದೆ ಇಂಗ್ಲೆಂಡ್​ ಟಿಕೆಟ್​

ರಹಾನೆ ಕೂಡ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವ ಇಂಗಿತ ವ್ಯಕ್ತಪಡಿಸಿದ್ದು, ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಮತ್ತೊಬ್ಬ ಮುಂಬೈನ ಯುವ ಆಟಗಾರ ಶ್ರೇಯಸ್​ ಅಯ್ಯರ್​ ಎಲ್ಲ ವಿಭಾಗದ ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದು ಅವರ ಹೆಸರು ಕೂಡ ಕೇಳಿ ಬರುತ್ತಿದೆ.

IPL

ಮುಂಬೈ: ಕಳೆದೊಂದು ವರ್ಷದಿಂದ ವಿಶ್ವಕಪ್​ ತಂಡವನ್ನು ತಯಾರು ಮಾಡುತ್ತಿರುವ ಬಿಸಿಸಿಐಗೆ ನಾಲ್ಕನೇ ಕ್ರಮಾಂಕದ ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಕಳೆದ ಐಪಿಎಲ್​ನಲ್ಲಿ ರಾಯುಡು ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಯಿತು. ಆದರೆ, ಅವರು ಸೀಮಿತ ಓವರ್​ಗಳ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಮತ್ತೆ 4 ನೇ ಕ್ರಮಾಂಕಕ್ಕೆ ಐಪಿಎಲ್​ ಪ್ರದರ್ಶನ ಪ್ರಮುಖವಾಗಲಿದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

ಮೊದಲು ರಾಹುಲ್​,ರಾಯುಡು ಹಾಗೂ ಇದೀಗ ರಹಾನೆ ಹಾಗೂ ಶ್ರೇಯಸ್​ ಅಯ್ಯರ್​ ಕೂಡ 4 ನೇ ಕ್ರಮಾಂಕ್ಕೆ ತಾವೂ ಸಿದ್ಧ ಎಂದು ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೆ ಕೆಲವು ಹಿರಿಯ ಆಟಗಾರರು ಕೂಡ ಇವರಿಬ್ಬರಿಗೆ ಬೆಂಬಲ ನೀಡಿದ್ದಾರೆ. ರಾಹುಲ್​ ಹಾಗೂ ರಾಯುಡು ಸ್ಥಿರ ಪ್ರದರ್ಶನದ ಕೊರತೆಯಿಂದ ಪರದಾಡುತ್ತಿದ್ದು, ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ರಾಯುಡು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ರಾಹುಲ್​ ಸಿಕ್ಕ ಅವಕಾಶಗಳನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳಲಿಲ್ಲ.

ಇನ್ನು ರಹಾನೆ ಕೂಡ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವ ಇಂಗಿತ ವ್ಯಕ್ತಪಡಿಸಿದ್ದು, ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಮತ್ತೊಬ್ಬ ಮುಂಬೈನ ಯುವ ಆಟಗಾರ ಶ್ರೇಯಸ್​ ಅಯ್ಯರ್​ ಎಲ್ಲ ವಿಭಾಗದ ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದು ಅವರ ಹೆಸರು ಕೂಡ ಕೇಳಿ ಬರುತ್ತಿದೆ.

ಒಟ್ಟಾರೆ ಈ ನಾಲ್ವರಿಗೆ ಈ ಬಾರಿಯ ಐಪಿಎಲ್​ ಒಂದು ರೀತಿಯ ಅಗ್ನಿ ಪರೀಕ್ಷೆಯಾಗಿದ್ದು, ಇಲ್ಲಿ ಯಾರು ಉತ್ತಮ ಪ್ರದರ್ಶನ ತೋರುತ್ತಾರೋ ಅವರಿಗೆ ವಿಶ್ವಕಪ್​​ ಟೂರ್​ಗೆ ಟಿಕೆಟ್​ ದೊರೆಯಲಿದೆ. ರಾಹುಲ್​ ಹಾಗೂ ರಾಯುಡು ಹೆಸರೇ ಹೆಚ್ಚಾಗಿ ಕೇಳು ಬರುತ್ತಿರುವ ಹಿನ್ನೆಲೆಯಲ್ಲಿ ಇವರಿಬ್ಬರಿಗೆ ಐಪಿಎಲ್​ ಕೊನೆ ಅವಕಾಶವಾಗಿದೆ.

ABOUT THE AUTHOR

...view details