ಕರ್ನಾಟಕ

karnataka

By

Published : May 10, 2019, 9:18 PM IST

ETV Bharat / briefs

ಅನುಭವಿ ಚೆನ್ನೈಗೆ ಸಾಧಾರಣ ಟಾರ್ಗೆಟ್ ನೀಡಿದ ಡೆಲ್ಲಿ ಹುಡುಗ್ರು..!

ಚೊಚ್ಚಲ ಫೈನಲ್ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸಾಕಷ್ಟು ಫೈನಲ್ ನೋಡಿರುವ ಹಾಗೂ ಕಪ್​​ ಗೆದ್ದಿರುವ ಚೆನ್ನೈ ನಡುವೆ ಯಾವ ತಂಡ ಉಪಾಂತ್ಯ ಪ್ರವೇಶಿಸಲಿದೆ ಎನ್ನುವುದು ಕೆಲ ಹೊತ್ತಿನಲ್ಲಿ ತಿಳಿಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್

ವಿಶಾಖಪಟ್ಟಣಂ:ಉಪಾಂತ್ಯ ಪ್ರವೇಶಕ್ಕಾಗಿ​ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 147 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​ ಗೆದ್ದ ಎಂ.ಎಸ್​.ಧೋನಿ ಕ್ಯಾಪಿಟಲ್​ ಹುಡುಗರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಪೃಥ್ವಿ ಶಾ ಕೇವಲ 5 ರನ್​ ಗಳಿಸಿ ನಿರ್ಗಮಿಸಿದರು. ಸ್ಫೋಟಕ ಆರಂಭದ ಸೂಚನೆ ನೀಡಿದ ಶಿಖರ್ ಧವನ್ ಅಬ್ಬರ 18 ರನ್ನಿಗೆ ಅಂತ್ಯವಾಯಿತು.

ನಂತರದಲ್ಲಿ ಕಾಲಿನ್ ಮುನ್ರೋ ಕೊಂಚ ಭರವಸೆ ಮೂಡಿಸಿದರಾದರೂ 27 ರನ್​ ಗಳಿಸಲಷ್ಟೇ ಶಕ್ತರಾದರು. ನಾಯಕ ಶ್ರೇಯಸ್ ಅಯ್ಯರ್ ಗಳಿಕೆ ಕೇವಲ 13.

ಕಳೆದ ಪಂದ್ಯದ ಹೀರೋ ರಿಷಭ್ ಪಂತ್ ಇಂದೂ ಸಹ ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನ ನಡೆಸಿದರು.

ಉತ್ತಮವಾಗಿ ಬ್ಯಾಟ್ ಬೀಸಿದ ಪಂತ್ 38 ರನ್​ ಗಳಿಸಿ ಪೆವಿಲಿಯನ್ ಸೇರಿದರು.

ಚೆನ್ನೈ ಪರ ಹರ್ಭಜನ್ ಸಿಂಗ್, ಬ್ರಾವೋ ಹಾಗೂ ಚಹರ್ ಹಾಗೂ ಜಡೇಜಾ ಎರಡು ವಿಕೆಟ್ ಕಿತ್ತರೆ, ತಾಹಿರ್​ ಒಂದು ವಿಕೆಟ್ ಪಡೆದರು.

ABOUT THE AUTHOR

...view details