ಕರ್ನಾಟಕ

karnataka

ETV Bharat / briefs

ಐಐಟಿ ಮದ್ರಾಸ್​​ನ ಪರೀಕ್ಷೆಯಲ್ಲಿ ಐಪಿಎಲ್​​​​​ ಬಗ್ಗೆ ಹೀಗೊಂದು ಪ್ರಶ್ನೆ...! ಅಚ್ಚರಿಗೊಂಡ ನೆಟಿಜನ್ಸ್

ಇಂದು ಐಐಟಿ ಮದ್ರಾಸ್​​ನಲ್ಲಿ ಮೆಟೀರಿಯಲ್ ಮತ್ತು ಎನರ್ಜಿ ಸೈನ್ಸ್ ವಿಷಯದ ಪರೀಕ್ಷೆ ನಡೆದಿತ್ತು. ನಲ್ವತ್ತು ಮಾರ್ಕಿನ ಪ್ರಶ್ನೆ ಪತ್ರಿಕೆಯಲ್ಲಿ ಐದು ಅಂಕದ ಅದೊಂದು ಪ್ರಶ್ನೆ ಸಾಕಷ್ಟು ಗಮನ ಸೆಳೆದಿತ್ತು.

By

Published : May 6, 2019, 11:41 PM IST

ಐಐಟಿ ಮದ್ರಾಸ್

ಚೆನ್ನೈ:ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಪುಸ್ತಕದಲ್ಲಿರುವ ವಿಚಾರವನ್ನೇ ಕೊಂಚ ಟ್ವಿಸ್ಟ್ ಮಾಡಿ ಕೇಳಲಾಗುತ್ತದೆ. ಸಿಲಬಸ್ ಹೊರತಾದ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಅರೆಕ್ಷಣ ದಂಗಾಗುವಂತೆ ಮಾಡುತ್ತದೆ. ಅಂತಹ ದಂಗಾಗುವ ಪ್ರಶ್ನೆಯೊಂದು ಇಲ್ಲಿದೆ.

ಇಂದು ಐಐಟಿ ಮದ್ರಾಸ್​​ನಲ್ಲಿ ಮೆಟೀರಿಯಲ್ ಮತ್ತು ಎನರ್ಜಿ ಸೈನ್ಸ್ ವಿಷಯದ ಪರೀಕ್ಷೆ ನಡೆದಿತ್ತು. ನಲ್ವತ್ತು ಮಾರ್ಕಿನ ಪ್ರಶ್ನೆ ಪತ್ರಿಕೆಯಲ್ಲಿ ಐದು ಅಂಕದ ಅದೊಂದು ಪ್ರಶ್ನೆ ಸಾಕಷ್ಟು ಗಮನ ಸೆಳೆದಿತ್ತು.

ಐದು ಅಂಕದ ಪ್ರಶ್ನೆ

ಐದು ಅಂಕದ ಆ ಪ್ರಶ್ನೆ ಹೀಗಿದೆ:

ಹಗಲು-ರಾತ್ರಿಯ ಕ್ರಿಕೆಟ್ ಪಂದ್ಯದಲ್ಲಿ ಇಬ್ಬನಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಹೆಚ್ಚಿನ ಪ್ರಮಾಣದ ಇಬ್ಬನಿಯಿಂದ ಚೆಂಡು ಒದ್ದೆಯಾಗುತ್ತದೆ. ಪರಿಣಾಮ ಸ್ಪಿನ್ನರ್​ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ಸವಾಲಿನ ಕೆಲಸವಾಗುತ್ತದೆ. ಅದೇ ರೀತಿ ವೇಗದ ಬೌಲರ್​ಗಳಿಗೆ ಲೈನ್ ಹಾಗೂ ಲೆಂತ್​​​ನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗುತ್ತದೆ. ಇದು ಸಹಜವಾಗಿಯೇ ಫೀಲ್ಡಿಂಗ್ ಮಾಡುವ ತಂಡಕ್ಕೆ ಅನಾನುಕೂಲವಾಗಿ ಪರಿಣಮಿಸುತ್ತದೆ. ಈ ಬಾರಿಯ ಐಪಿಎಲ್​​ನಲ್ಲಿ ಮೊದಲ ಕ್ವಾಲಿಫೈಯರ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೇ 7ರಂದು ಆಡಲಿದೆ. ಮೇ 7ರ ಹವಾಮಾನದ ಪ್ರಕಾರ ಪಂದ್ಯ ಆರಂಭದ ಸಮಯದಲ್ಲಿ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್​ ಇದ್ದರೆ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ 27 ಡಿಗ್ರಿ ಸೆಲ್ಸಿಯಸ್​​ಗೆ ಕುಸಿಯಲಿದೆ. ಈ ಮಾಹಿತಿಯ ಪ್ರಕಾರ, ಒಂದು ವೇಳೆ ಎಂ.ಎಸ್​​.ಧೋನಿ ಟಾಸ್ ಗೆದ್ದರೆ ನೀವು ಬೌಲಿಂಗ್​​ ಆಯ್ದುಕೊಳ್ಳುವಂತೆ ಸಲಹೆ ನೀಡುತ್ತೀರಾ ಅಥವಾ ಬ್ಯಾಟಿಂಗ್ ಮಾಡುವಂತೆ ಸಲಹೆ ನೀಡುತ್ತೀರಾ..? ಗಮನಿಸಿ: ಖಚಿತ ಸಮರ್ಥನೆ ಇಲ್ಲದ ಉತ್ತರ ಅಂಕಗಳು ದೊರೆಯುವುದಿಲ್ಲ.

ಸದ್ಯ ಈ ಪ್ರಶ್ನೆ ಇಂಟರ್​ನೆಟ್​​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಶ್ನೆಯ ಫೋಟೋವನ್ನು ಪೋಸ್ಟ್ ಮಾಡಿ, ಯಾರಾದರೂ ಧೋನಿ ಹಾಗೂ ಸಿಎಸ್​​ಕೆ ತಂಡಕ್ಕೆ ಸಹಾಯ ಮಾಡುವಿರಾ ಎಂದು ಫನ್ನಿಯಾಗಿ ಕೇಳಿದೆ.

ABOUT THE AUTHOR

...view details