ಕರ್ನಾಟಕ

karnataka

By

Published : May 7, 2019, 9:23 PM IST

ETV Bharat / briefs

ಕುಸಿದ ಚೆನ್ನೈ ತಂಡಕ್ಕೆ ಆಸರೆಯಾದ ಧೋನಿ,ರಾಯುಡು... ಮುಂಬೈ ಗೆಲುವಿಗೆ 132 ರನ್​ ಗುರಿ

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲವಾಗಿದೆ. ಆರಂಭಿಕರ ವೈಫಲ್ಯ, ಕುಸಿತವಾದ ಮಧ್ಯಮ ಕ್ರಮಾಂಕದಿಂದಾಗಿ ಸಿಎಸ್​ಕೆ ತಂಡ ಮುಂಬೈಗೆ ಸಾಧಾರಣ ಟಾರ್ಗೆಟ್ ನೀಡಿದೆ.

ಚೆನ್ನೈ

ಚೆನ್ನೈ:ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಮೊದಲ ಕ್ವಾಲಿಫೈಯರ್​ನಲ್ಲಿ ಸಿಎಸ್​ಕೆ ನಿಗದಿತ 20 ಓವರ್​ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 131 ರನ್​​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರ ಫಫ್​ ಡು ಪ್ಲೆಸಿಸ್ 6 ರನ್ನಿಗೆ ಔಟಾದರೆ ಶೇನ್ ವ್ಯಾಟ್ಸನ್​ 10 ರನ್​​ ಗಳಿಸಿ ಪೆವಿಲಿಯನ್ ಸೇರಿದರು.

ಮಧ್ಯಮ ಕ್ರಮಾಂಕದಲ್ಲಿ ಐಪಿಎಲ್​ ಸ್ಪೆಷಲಿಸ್ಟ್ ಸುರೇಶ್ ರೈನಾ ಕೇವಲ 5 ರನ್ನಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಮುರಳಿ ವಿಜಯ್​ ಭರವಸೆ ಮೂಡಿಸಿದರಾದರೂ 26 ರನ್ನಿಗೆ ಹೋರಾಟ ಅಂತ್ಯವಾಯಿತು.

ನಾಲ್ಕು ವಿಕೆಟ್​ ಪತನವಾದ ಬಳಿಕ ಜೊತೆಯಾದ ನಾಯಕ ಎಂ.ಎಸ್​.ಧೋನಿ ಹಾಗೂ ಅಂಬಟಿ ರಾಯುಡು ತಂಡಕ್ಕೆ ಆಸರೆಯಾದರು. ಬೌಂಡರಿ ಸಿಕ್ಸರ್​​ಗಳ ಮೂಲಕ ನಿಧಾನವಾಗಿ ಸ್ಕೋರ್​ ಹೆಚ್ಚಿಸುತ್ತಾ ಸಾಗಿದರು.

ಧೋನಿ ಔಟಾಗದೆ 37 ರನ್​​ ಗಳಿಸಿದರೆ, ರಾಯುಡು 42 ರನ್​ ಸಿಡಿಸಿ ಅಜೇಯರಾಗುಳಿದರು. ಈ ಇಬ್ಬರೂ ಮುರಿಯದ ಐದನೇ ವಿಕೆಟ್​​ಗೆ 66 ರನ್​ಗಳ ಜೊತೆಯಾಟ ಆಡಿದರು.

ಮುಂಬೈ ಪರ ರಾಹುಲ್ ಚಹರ್​​​​ 2 ವಿಕೆಟ್ ಪಡೆದರೆ ಕೃನಾಲ್ ಪಾಂಡ್ಯ ಹಾಗೂ ಜಯಂತ್ ಯಾದವ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ABOUT THE AUTHOR

...view details