ಕರ್ನಾಟಕ

karnataka

By

Published : Jun 15, 2019, 5:09 PM IST

ETV Bharat / briefs

ಇದು ಯುದ್ಧವಲ್ಲ,ಶಾಂತರಾಗಿರಿ! ಇಂಡೋ-ಪಾಕ್​ ಪಂದ್ಯ ಮುನ್ನ ವಸೀಂ​ ಅಕ್ರಮ್​ ಮನವಿ

ನಾಳೆ ಭಾರತ-ಪಾಕ್​ ಮುಖಾಮುಖಿಯಾಗಲಿದ್ದು, ಉಭಯ ದೇಶದ ಕ್ರೀಡಾಭಿಮಾನಿಗಳು ಶಾಂತವಾಗಿರುವಂತೆ ಪಾಕ್​​ ಮಾಜಿ ಕ್ರಿಕೆಟಿಗ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇಂಡೋ-ಪಾಕ್​ ಫೈಟ್​​

ಲಂಡನ್​:ನಾಳೆ ಐಸಿಸಿ ವಿಶ್ವಕಪ್​ನ ಹೈ ವೋಲ್ಟೇಜ್​ ಪಂದ್ಯದಲ್ಲಿ ಭಾರತ-ಪಾಕ್​ ಮುಖಾಮುಖಿಯಾಗುತ್ತಿದ್ದು, ಉಭಯ ದೇಶದ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಪಂದ್ಯದ ಕಿಚ್ಚು ಜೋರಾಗಿದೆ. ಮ್ಯಾಚ್​ ವೀಕ್ಷಣೆ ಮಾಡುವ ಜೋಶ್​​ನಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಂತೆ ಪಾಕ್​ ಮಾಜಿ ಕ್ರಿಕೆಟಿಗ ವಸೀಂ​ ಅಕ್ರಮ್​ ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಉಭಯ ದೇಶಗಳ ನಡುವಿನ ಪಂದ್ಯ ನೋಡಿ ಆನಂದಿಸಿ. ಕ್ರೀಡೆಯಲ್ಲಿ ಯಾವುದಾದರೊಂದು ತಂಡ ಗೆಲ್ಲುವುದು ಸಹಜ. ಮತ್ತೊಂದು ತಂಡ ಸೋಲಲೇಬೇಕು. ಇದೇ ವಿಷಯವನ್ನಿಟ್ಟುಕೊಂಡು ಕ್ರೀಡಾಭಿಮಾನಿಗಳು ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಇಂಡೋ-ಪಾಕ್​ ಕ್ಯಾಪ್ಟನ್​​

ವಿಶ್ವಕಪ್​​ನಲ್ಲಿ ನಾವು ಭಾರತದ ಎದುರು ಗೆಲುವು ಕಂಡಿಲ್ಲ ನಿಜ. ಆದರೆ ಪಂದ್ಯವನ್ನು ಆನಂದಿಸಿದ್ದೇವೆ. ಪಾಕಿಸ್ತಾನ ತಂಡಕ್ಕೆ ಹೋಲಿಕೆ ಮಾಡಿದಾಗ ಭಾರತ ಬಲಿಷ್ಠ ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗ ಹೊಂದಿದೆ. ಆದರೆ ಮೈದಾನದಲ್ಲಿ ಉಭಯ ತಂಡದ ಆಟಗಾರರಿಗೂ ಒತ್ತಡ ಇರುತ್ತದೆ. ಒತ್ತಡದಿಂದ ಹೊರಬಂದು ಆಡುವ ತಂಡ ನಿಜವಾಗಲೂ ಗೆಲುವು ದಾಖಲಿಸುತ್ತದೆ ಎಂದು ತಿಳಿಸಿದ್ದಾರೆ.

ಪಾಕ್​ ಈಗಾಗಲೇ ತಾನಾಡಿರುವ ವೆಸ್ಟ್​ ಇಂಡೀಸ್​ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದರೆ, ಇಂಗ್ಲೆಂಡ್​ ವಿರುದ್ಧ ಗೆಲುವು ದಾಖಲಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಗಾಹುತಿಯಾಗಿದೆ.

ABOUT THE AUTHOR

...view details