ಕರ್ನಾಟಕ

karnataka

ETV Bharat / briefs

ನಾನು ಮೂರ್ಖ, ಆದರೆ ಅತಿದೊಡ್ಡ ಮೂರ್ಖನಲ್ಲ: ಮಣಿಶಂಕರ್ ಅಯ್ಯರ್

2017ರಲ್ಲಿ ಅಯ್ಯರ್, ನೀಚ ಎನ್ನುವ ಹೇಳಿಕೆ ನೀಡಿದ್ದ ಬಳಿಕ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ನಂತರದಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಲಾಗಿದ್ದರೂ ರಾಜಕಾರಣದಲ್ಲಿ ಅಷ್ಟೊಂದು ಸಕ್ರಿಯರಾಗಿರಲಿಲ್ಲ

By

Published : May 15, 2019, 3:09 PM IST

ಮಣಿಶಂಕರ್ ಅಯ್ಯರ್

ಶಿಮ್ಲಾ: ಎರಡು ವರ್ಷದ ಹಿಂದೆ ಮೋದಿ ಅವರನ್ನ ನೀಚ ಕರೆದ ಕಾಂಗ್ರೆಸ್​​ನ ಹಿರಿಯ ನಾಯಕ ಮಣಿಶಂಕರ್​​ ಅಯ್ಯರ್​ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ.

ಕೆಲ ದಿನಗಳ ಹಿಂದೆ ಲೇಖನವೊಂದನ್ನು ಬರೆದಿದ್ದರು. ಅದರಲ್ಲಿ ಅಯ್ಯರ್ ಈ ಹಿಂದಿನ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದರು. ಇದೇ ವಿಚಾರಕ್ಕೆ ಮತ್ತೆ ಮಾತನಾಡಿರುವ ಮಣಿಶಂಕರ್​ ಅಯ್ಯರ್​​, ನಾನು ಮೂರ್ಖನಿರಬಹುದು ಆದರೆ ಅತಿ ದೊಡ್ಡ ಮೂರ್ಖನಲ್ಲ ಎಂದು ಶಿಮ್ಲಾದಲ್ಲಿ ಇಂದು ಹೇಳಿದ್ದಾರೆ.

2017ರಲ್ಲಿ ಅಯ್ಯರ್, ನೀಚ ಎನ್ನುವ ಹೇಳಿಕೆ ನೀಡಿದ್ದ ಬಳಿಕ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ನಂತರದಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಲಾಗಿದ್ದರೂ ರಾಜಕಾರಣದಲ್ಲಿ ಅಷ್ಟೊಂದು ಸಕ್ರಿಯವಾಗಿರಲಿಲ್ಲ

ಮೋದಿ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಜನ ಮೋದಿಯನ್ನು ತಿರಸ್ಕರಿಸಲಿದ್ದಾರೆ ಎಂದು ಅಯ್ಯರ್ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿರುವ ತಾವು ಬರೆದಿರುವ ಆರ್ಟಿಕಲ್​ ಅನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಒಂದು ವಾಖ್ಯೆಯನ್ನ ಎತ್ತಿಕೊಂಡು ವಿವಾದ ಎಬ್ಬಿಸಲಾಗುತ್ತಿದೆ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದರು.

ABOUT THE AUTHOR

...view details