ಕರ್ನಾಟಕ

karnataka

By

Published : Apr 14, 2019, 12:02 PM IST

ETV Bharat / briefs

ಬತ್ತಿಹೊದ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ಸಾಗಾಟ ದಂಧೆ ಜೋರು

ಲೋಕ ಸಮರದ ನಿಮಿತ್ತ ಜನಪ್ರತಿನಿಧಿಗಳು ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದೇ, ಈ ಮರಳು ದಂಧೆಕೋರರಿಗೆ ಅನುಕೂಲವಾಗಿ ಪರಿಣಮಿಸಿದೆ. ಬೀದರ್​ನ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.

ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ಸಾಗಾಟ

ಬೀದರ್:ಚುನಾವಣೆ ನಿಮಿತ್ತ ಜನಪ್ರತಿನಿಧಿಗಳು ಬ್ಯುಸಿಯಾಗಿದ್ದಾರೆ. ಭಯಂಕರ ಬರ ನಿರ್ವಹಣೆ ಹಾಗೂ ಚುನಾವಣೆ ಕರ್ತವ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಇದೇ ಸಮಯ ಬಳಸಿಕೊಂಡ ಖದೀಮರ ಗ್ಯಾಂಗ್, ಇಲ್ಲಿನ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ಸಾಗಾಟ ದಂಧೆಯನ್ನು ಜೋರಾಗಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಕೌಠಾ, ಹಿಪ್ಪಳಗಾಂವ್, ಇಸ್ಲಾಂಪೂರ್, ಬಾಬಳಿ, ಮಣಿಗೆಂಪೂರ್, ಹೆಡಗಾಪೂರ್, ನಿಡೊದಾ, ನಿಟ್ಟೂರ್, ಹಾಲಹಳ್ಳಿ, ಸಂಗಮ, ಖೇಡ, ಕಳಗಾಪೂರ್, ಸೊನಾಳ, ಲಖನಗಾಂವ್, ಮೆಹಕರ ಸೇರಿದಂತೆ ಹಲವು ಗ್ರಾಮಗಳ ಪಕ್ಕದಲ್ಲಿ ಮಾಂಜ್ರಾ ನದಿಯಲ್ಲಿ ನೂರಾರು ಟ್ರಾಕ್ಟರ್​ಗಳು, ಜೆಸಿಬಿಗಳ ಮೂಲಕ ಹಗಲು-ರಾತ್ರಿ ಎನ್ನದೆ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಬತ್ತಿ ಹೊದ ನದಿ ಹೆದ್ದಾರಿಯಂತಾಗಿ ಟ್ರಾಕ್ಟರ್​ಗಳ ಓಡಾಟದಿಂದ ರಸ್ತೆಯೇ ನಿರ್ಮಾಣವಾಗಿದೆ. ಇಷ್ಟೊಂದು ಭಾರಿ ಮಟ್ಟದಲ್ಲಿ ಅಕ್ರಮ ನಡೆಯುತ್ತಿರುವುದಕ್ಕೆ ಅಧಿಕಾರಿಗಳು ಚುನಾವಣೆ ಹಾಗೂ ಬರ ನಿರ್ವಹಣೆಯಲ್ಲಿ ನಿರತರಗಿರುವುದೇ ಕಾರಣ ಎನ್ನಲಾಗ್ತಿದೆ.

ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ಸಾಗಾಟ

ಕಂದಾಯ ಅಧಿಕಾರಿಗಳು, ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಇಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗುವ ಅಗತ್ಯವಿದೆ. ಭೂ ತಾಯಿಯ ಒಡಲನ್ನು ಕೊಳ್ಳೆ ಹೊಡೆಯುವ ದಂಧೆಕೊರರನ್ನು ತಡೆಯುವ ಅಗತ್ಯವಿದೆ.

For All Latest Updates

TAGGED:

ABOUT THE AUTHOR

...view details