ಕರ್ನಾಟಕ

karnataka

ETV Bharat / briefs

ಡಿಮಾನಿಟೈಸೇಷನ್​ ಬಳಿಕ ಬ್ಯಾಂಕ್​ಗಳಲ್ಲಿನ ನಗದಿಗೆ ಕೈಹಾಕಿದ ಮೋದಿ ಸರ್ಕಾರ..! -

ವರ್ಷಕ್ಕೆ ಬ್ಯಾಕ್​ಗಳಿಂದ ನಗದು ಸ್ವೀಕೃತಿಯನ್ನು ₹ 10 ಲಕ್ಷಕ್ಕೆ ನಿಗದಿಪಡಿಸಿ ಹೆಚ್ಚುವರಿ ನಗದು ಹಿಂತೆಗೆತದ ಮೇಲೆ ತೆರಿಗೆ ವಿಧಿಸುವ ಕುರಿತು ಯೋಜನೆ ಹಾಕಿಕೊಂಡಿದೆ. ಡಿಜಿಟಲ್ ಪಾವತಿ ಅಥವಾ ಆನ್​ಲೈನ್ ಮುಖಾಂತರ ಹಣ ವರ್ಗಾವಣೆ ಕ್ರಮಗಳನ್ನು ಉತ್ತೇಜಿಸಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

By

Published : Jun 11, 2019, 10:44 AM IST

ನವದೆಹಲಿ: ಕಪ್ಪು ಹಣ ಚಲಾವಣೆ ತಡೆಯುವ ಹಾಗೂ ನೋಟುಗಳ ಬಳಕೆಯನ್ನು (ಪೇಪರ್​ ಕರೆನ್ಸಿ) ತಗ್ಗಿಸುವ ಉದ್ದೇಶದಿಂದ ವಾರ್ಷಿಕ ನಗದು ಹಿಂತೆಗೆತಕ್ಕೆ ನಿರ್ದಿಷ್ಟ ಮೊತ್ತ ನಿಗದಿಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ವರ್ಷಕ್ಕೆ ಬ್ಯಾಂಕ್​ಗಳಿಂದ ನಗದು ಸ್ವೀಕೃತಿಯನ್ನು ₹ 10 ಲಕ್ಷಕ್ಕೆ ನಿಗದಿಪಡಿಸಿ ಹೆಚ್ಚುವರಿ ನಗದು ಹಿಂತೆಗೆತದ ಮೇಲೆ ತೆರಿಗೆ ವಿಧಿಸುವ ಕುರಿತು ಯೋಜನೆ ಹಾಕಿಕೊಂಡಿದೆ. ಡಿಜಿಟಲ್ ಪಾವತಿ ಅಥವಾ ಆನ್​ಲೈನ್ ಮುಖಾಂತರ ಹಣ ವರ್ಗಾವಣೆ ಕ್ರಮಗಳನ್ನು ಉತ್ತೇಜಿಸಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ವೈಯಕ್ತಿಕವಾಗಿ ಬಹುತೇಕ ಮಂದಿಗೆ ವಾರ್ಷಿಕ ₹ 10 ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಿಂತೆಗೆತದ ಅಗತ್ಯ ಇರುವುದಿಲ್ಲ. ಹೆಚ್ಚಿನ ಮೊತ್ತದ ನಗದು ಹಿಂತೆಗೆತವು ದೃಢೀಕರಣ ಹಾಗೂ ಆಧಾರ್ ಕಡ್ಡಾಯಗೊಳಿಸುವಿಕೆಯ ಬಗ್ಗೆ ಸರ್ಕಾರ ಭಾವಿಸಿದೆ ಎಂದು ವರದಿಯಾಗಿದೆ.

ಈ ನಡೆಯಿಂದ ವ್ಯಕ್ತಿಗಳ ಆದಾಯ ತೆರಿಗೆ ವಿವರಕ್ಕೂ ಖರ್ಚು ವೆಚ್ಚಗಳಿಗೂ ಹೋಲಿಕೆ ಮಾಡುವುದು ಸುಲಭವಾಗಲಿದೆ ಎಂಬ ಸ್ಪಷ್ಟನೆ ಇದೆ. ಜೊತೆಗೆ ಇಂತಹ ಕ್ರಮದಿಂದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ತೊಂದರೆ ಆಗಬಾರದು ಎಂಬ ಎಚ್ಚರಿಕೆಯೂ ಸರ್ಕಾರಕ್ಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details