ಕರ್ನಾಟಕ

karnataka

ETV Bharat / briefs

ರಂಜಾನ್ ಉಪವಾಸ ಹಿನ್ನೆಲೆ... ಅರ್ಜಿ ತಿರಸ್ಕರಿಸಿ, ಸಮಯ ಬದಲಾವಣೆ ಅಸಾಧ್ಯ ಎಂದ ಆಯೋಗ

ಐದು, ಆರು ಹಾಗೂ ಏಳನೇ ಹಂತದ ಚುನಾವಣೆ ವೇಳೆ ಈ ಮೊದಲಿನ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆಗೆ ಆರಂಭಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

By

Published : May 5, 2019, 11:01 PM IST

ಆಯೋಗ

ನವದೆಹಲಿ:ಮುಸ್ಲಿಮರ ಪವಿತ್ರ ಮಾಸ ರಂಜಾನ್ ವೇಳೆ ಮತದಾನದ ಸಮಯವನ್ನು ಬದಲಿಸಬೇಕು ಎನ್ನುವ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ರಂಜಾನ್ ಉಪವಾಸ ನಾಳೆಯಿಂದ ಆರಂಭವಾಗುತ್ತಿದೆ. ಲೋಕಸಭಾ ಚುನಾವಣೆಯ ಐದನೇ ಹಂತದ ಚುನಾವಣೆ ಸಹ ನಾಳೆಯೇ ನಡೆಯಲಿದೆ. ಐದು, ಆರು ಹಾಗೂ ಏಳನೇ ಹಂತದ ಚುನಾವಣೆ ವೇಳೆ ಈ ಮೊದಲಿನ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆಗೆ ಆರಂಭಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಅರ್ಜಿಯನ್ನು ಪರಿಗಣಿಸಿದ್ದ ಸರ್ವೋಚ್ಛ ನ್ಯಾಯಾಲಯ, ನಿರ್ಧಾರವನ್ನು ಚುನಾವಣಾ ಆಯೋಗಕ್ಕೆ ವಹಿಸಿತ್ತು.

ಸದ್ಯ ಈ ಕುರಿತಂತೆ ತನ್ನ ನಿರ್ಧಾರ ಪ್ರಕಟಿಸಿರುವ ಆಯೋಗ, ಉಳಿದಿರುವ ಮತದಾನದ ಹಂತಗಳಲ್ಲಿ ಸಮಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ.

ABOUT THE AUTHOR

...view details